ರಾಷ್ಟ್ರೀಯ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲೆಗೆ ಸಂಚು!

Pinterest LinkedIn Tumblr


ಕೋಲ್ಕತಾ: ರಾಜಕೀಯ ಪಕ್ಷವೊಂದು ತನ್ನ ಹತ್ಯೆಗೆ ಯತ್ನಿಸಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಗಂಭೀರವಾಗಿ ಆರೋಪಿಸಿದ್ದಾರೆ.

ರಾಜಕೀಯ ಪಕ್ಷವೊಂದು ನನ್ನ ಹತ್ಯೆಗೆ ಸುಫಾರಿ(ಗುತ್ತಿಗೆ) ಕೊಟ್ಟಿತ್ತು. ನಾನು ಮನೆಗೆ ವಾಪಸ್ ತೆರಳುವ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ನನ್ನ ಹತ್ಯೆಗೆ ಪ್ರಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ತನಗೆ ಮನೆಯನ್ನು ಬದಲಾಯಿಸುವಂತೆ ಹೇಳಿದ್ದರು. ಈ ಹಿಂದೆಯೂ ನನ್ನ ಕೊಲೆಗೆ ಸಂಚು ನಡೆದಿತ್ತು ಎಂದು ಆರೋಪಿಸಿದರು.

ಖಾಸಗಿ ಟಿವಿ ಚಾನೆಲ್ ಸಂದರ್ಶನವೊಂದರಲ್ಲಿ ಮಮತಾ ಬ್ಯಾನರ್ಜಿ ಈ ಹೇಳಿಕೆ ನೀಡಿದ್ದಾರೆ. ಕೂಡಲೇ ಸರ್ಕಾರಿ ಬಂಗ್ಲೆಯನ್ನು ಬದಲಾಯಿಸುವಂತೆ ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಈ ಮಾಹಿತಿ ನಿಜವಾಗಿರುವುದಾಗಿ ಮಮತಾ ತಿಳಿಸಿದ್ದಾರೆ.

ನಾನು ಸಾವಿಗೆ ಹೆದರುವುದಿಲ್ಲ ಎಂದು ಹೇಳಿರುವ ಮಮತಾ ಬ್ಯಾನರ್ಜಿ ಆ ರಾಜಕೀಯ ಪಕ್ಷ ಯಾವುದು? ಯಾರು ಎಂಬ ಗುಟ್ಟನ್ನು ಬಹಿರಂಗಪಡಿಸಿಲ್ಲ. ನಾನು 2 ಕೋಟಿ ರೂಪಾಯಿ ಹಣವನ್ನು ಕನ್ಯಾಶ್ರೀ ಯೋಜನೆಗಾಗಿ ವಿನಿಯೋಗಿಸಿದ್ದೇನೆ. ಆದರೆ ವಿರೋಧ ಪಕ್ಷ ಅದರ ಲಾಭ ಪಡೆಯಲು ಹವಣಿಸುತ್ತಿದೆ ಎಂದು ದೂರಿದರು.

ಕಾಂಗ್ರೆಸ್, ಬಿಜೆಪಿ ಹಾಗೂ ಸಿಪಿಐ(ಎಂ) ಪಕ್ಷಗಳು ರೈತರ ಆತ್ಮಹತ್ಯೆ, ಕೋಮುಗಲಭೆ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದಾಗಿ ಆರೋಪಿಸಿದರು.

Comments are closed.