ರಾಷ್ಟ್ರೀಯ

ಉತ್ತರ ಪ್ರದೇಶ ಡಿಜಿಪಿಯ ನಕಲಿ ಟ್ವಿಟ್ಟರ್ ಖಾತೆ ತೆರೆದ 10ನೇ ತರಗತಿ ಬಾಲಕ

Pinterest LinkedIn Tumblr


ಲಖನೌ: ಉತ್ತರ ಪ್ರದೇಶದ 10ನೇ ತರಗತಿಯ ಬಾಲಕನೊಬ್ಬ ಅಲ್ಲಿನ ಡಿಜಿಪಿಯ ಹೆಸರಲ್ಲಿ ಟ್ವಿಟ್ಟರ್ ಅಕೌಂಟ್‌ ಅನ್ನ ಓಪನ್ ಮಾಡಿದ್ದಾನೆ. ತನ್ನ ಹಿರಿಯ ಸಹೋದರನಿಗಾದ 45 ಸಾವಿರ ವಂಚನೆ ಕುರಿತು ಗೋರಖ್‌ಪುರ ಜಿಲ್ಲೆಯ ಸ್ಥಳೀಯ ಪೊಲೀಸರಿಗೆ ದೂರು ನೀಡಿದ್ರೂ ವಂಚಕನ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ರು. ಇದ್ರಿಂದ ಮನನೊಂದ ಬಾಲಕ ಈ ರೀತಿ ಖತರ್ನಾಕ್ ಕೆಲಸ ಮಾಡಿದ್ದಾನೆಂದು ತಿಳಿದು ಬಂದಿದೆ.

ಅಲ್ಲದೆ, ಈ ಹಿಂದೆ ಈ ಪ್ರಕರಣದ ಕುರಿತು ಕ್ರಮ ಕೈಗೊಳ್ಳದ ಪೊಲೀಸರು, ಡಿಜಿಪಿಯ ನಕಲಿ ಟ್ವಿಟ್ಟರ್ ಅಕೌಂಟ್‌ನಿಂದ ಸೂಚನೆ ಬಂದ ತಕ್ಷಣ ಕೇಸ್ ನಡೆಸಿಬಾಲಕನ ಅಣ್ಣನಿಗೆ 30 ಸಾವಿರ ವಾಪಸ್ ಮಾಡಿದ್ದು, ಉಳಿದ ಹಣವನ್ನು ಶೀಘ್ರದಲ್ಲೇ ನೀಡೋದಾಗಿಯೂ ಭರವಸೆ ಕೊಟ್ಟಿದ್ದಾರೆ. ಒಂದು ತಿಂಗಳ
ಹಿಂದೆ ಡಿಜಿಪಿ ಕಚೇರಿ ಹಜರತಗಂಜ್ ಪೊಲೀಸ್ ಠಾಣೆಗೆ ಈ ಮಾಹಿತಿ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಕೇಸ್ ದಾಖಲಿಸಿಕೊಳ್ಳಲಾಗಿದೆ. ನಂತರ
ಸೈಬರ್‌ ಸೆಲ್‌ನವರು ಈ ಕೇಸ್‌ನ ಜಾಡು ಹಿಡಿದು, ಉತ್ತರ ಪ್ರದೇಶ ಡಿಜಿಪಿ ಓ.ಪಿ ಸಿಂಗ್ ಹೆಸರಲ್ಲಿ ಟ್ವಿಟ್ಟರ್ ಖಾತೆ ಹಾಗೂ ಅವರ ಫೋಟೋವನ್ನ ಹಾಕಿದ್ದು,
ಗೋರಖ್‌ಪುರದ ಮಹಾರಾಜ್ ಗಂಜ್ ಪ್ರದೇಶದ ಒಂದು ಮೊಬೈಲ್‌ ಫೋನ್‌ನಿಂದ ಎಂಬುದು ಬೆಳಕಿಗೆ ಬಂದಿದೆ. ಬಳಿಕ, ಸೈಬರ್ ವಂಚನೆಯಡಿ ಈ ಬಾಲಕನನ್ನು ಹಿಡಿಯಲು ಸೈಬರ್ ಸೆಲ್ ಯಶಸ್ವಿಯಾಗಿದ್ದಾರೆ. ಹಾಗೆ, 10ನೇ ತರಗತಿಯ ಬಾಲಾರೋಪಿ ಹಾಗೂ ಆತನ ಮತ್ತೊಬ್ಬ ಗೆಳೆಯನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ಡಿಜಿಪಿಯ ಆದೇಶದಂತೆ ಎಚ್ಚರಿಕೆ ನೀಡಿ ಬಿಟ್ಟು ಕಳಿಸಿದೆ. ಇಬ್ಬರೂ ಆರೋಪಿಗಳು ಶಾಲೆಗೆ ಹೋಗುತ್ತಿರುವ ಬಾಲಕರಾದ್ದರಿಂದ ಇಬ್ಬರ ಭವಿಷ್ಯದ ದೃಷ್ಟಿಯಿಂದ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಉತ್ತರ ಪ್ರದೇಶ ಡಿಜಿಪಿ ಓ.ಪಿ.ಸಿಂಗ್ ಮಾಹಿತಿ ನೀಡಿದ್ದಾರೆ.

ಅಲ್ಲದೆ, ತನ್ನ ಗ್ರಾಮದ ಮತ್ತೊಬ್ಬ ಬಾಲಕ ಕೊಟ್ಟ ಐಡಿಯಾದಿಂದ, ತನ್ನ ಗೆಳೆಯನ ಮೊಬೈಲ್ ಫೋನ್‌ ಪಡೆದುಕೊಂಡು ಡಿಜಿಪಿಯ ನಕಲಿ ಟ್ವಿಟ್ಟರ್ ಖಾತೆ ತೆರೆದಿದ್ದನ್ನ ಒಪ್ಪಿಕೊಂಡಿದ್ದಾನೆ. ಈ ವೇಳೆ ಸಾದಿಕ್ ಅನ್ಸಾರಿ ಎಂಬಾತನೊಬ್ಬ ತನ್ನ ಅಣ್ಣನಿಗೆ ದುಬೈನಲ್ಲಿ ಕೆಲಸ ಕೊಡಿಸೋದಾಗಿ ಹೇಳಿ, 45 ಸಾವಿರ ಹಣ ಪಡೆದುಕೊಂಡು ವಂಚಿಸಿದ್ದನ್ನ ಹೇಳಿಕೊಂಡಿದ್ದಾನೆ. ಅಲ್ಲದೆ, ಗುಲ್ಹಾರಿಯಾ ಬಜಾರ್ ಪೊಲೀಸರಿಗೆ ತನ್ನ ಕುಟುಂಬ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲವೆಂದೂ, ತಾನೂ ಸಹ ತನ್ನ ಕುಟುಂಬದವರ ಜೊತೆಗೆ ಪೊಲೀಸ್ ಠಾಣೆಗೆ ಹಲವು ಬಾರಿ ಭೇಟಿ ನೀಡಿರೋದಾಗಿಯೂ ೧೦ನೇ ತರಗತಿಯ ಬಾಲಕ ಸೈಬರ್ ಸೆಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಇನ್ನು, ಯುಪಿ – 100 ನಲ್ಲಿ ಜಿಲ್ಲಾ ಪೊಲೀಸರಿಗೆ ಆರೋಪಿ ವಿರುದ್ಧ ದೂರು ನೀಡಲು ಸೂಚಿಸಿದ್ದಾಗಿಯೂ ಬಾಲಕ ಬಾಯ್ಬಿಟ್ಟಿದ್ದಾನೆ. ಅಲ್ಲದೆ, ತನ್ನ ಊರಿನ ಗೆಳೆಯನೊಬ್ಬ ಉತ್ತರ ಪ್ರದೇಶ ಡಿಜಿಪಿ ಹೆಸರಲ್ಲಿ ಟ್ವಿಟ್ಟರ್ ಐಡಿ ಸೃಷ್ಟಿಸಿ ಗೋರಖ್‌ಪುರ ಎಸ್‌ಎಸ್‌ಪಿಗೆ ಪ್ರಕರಣ ಸಂಬಂಧ ಕ್ರಮ ಕೈಗೊಳ್ಳಲು ಸೂಚಿಸಿರೋದಾಗಿಯೂ ತನ್ನ ಹೇಳಿಕೆಯಲ್ಲಿ ದಾಖಲಿಸಿದ್ದಾನೆ.

Comments are closed.