ಹೊಸದಿಲ್ಲಿ: ‘ಭಾರತವೇನು ವಿನಯ್ ಕಟಿಯಾರ್ ಅಪ್ಪನ ದೇಶವೇ’ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಎನ್ಸಿ ನಾಯಕ ಫಾರೂಕ್ ಅಬ್ದುಲ್ಲಾ ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಬ್ದುಲ್ಲಾ ‘ಇದು ಕಟಿಯಾರ್ ಅಪ್ಪನ ದೇಶವಲ್ಲಾ,ನಮ್ಮೆಲ್ಲರ ದೇಶ. ಕಟಿಯಾರ್ ದಿನಕ್ಕೊಂದರಂತೆ ಇಂತಹ ಹೇಳಿಕೆ ನೀಡುತ್ತಿದ್ದಾರೆ’ ಎಂದರು.
‘ಹಿಂಸೆಯನ್ನು ಪ್ರಚೋದಿಸಲು ಕಟಿಯಾರ್ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಯಾವ ಧರ್ಮವೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ’ ಎಂದರು.
ಬಿಜೆಪಿ ರಾಜ್ಯಸಭಾ ಸದಸ್ಯ ವಿನಯ್ ಕಟಿಯಾರ್ ಬುಧವಾರ ‘ಮುಸ್ಲಿಮರಿಗೆ ಭಾರತದಲ್ಲಿ ಇರಲು ಅವಕಾಶ ನೀಡಬಾರದು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
-ಉದಯವಾಣಿ
Comments are closed.