ರಾಷ್ಟ್ರೀಯ

ಕುರುಕಲು ತಿಂಡಿ ಮಾರಾಟ ಮಾಡಿ ಎಂದು ‘ಚಾಯ್‌ವಾಲಾ’ ಮಾತ್ರ ಹೇಳಬಲ್ಲ: ಹಾರ್ದಿಕ್‌ ಪಟೇಲ್

Pinterest LinkedIn Tumblr


ಹೊಸದಿಲ್ಲಿ: ಕುರುಕಲು ತಿಂಡಿ ಮಾರುವುದೂ ಒಂದು ಉದ್ಯೋಗ ಎಂದು ‘ಚಾಯ್‌ವಾಲಾ’ ಮಾತ್ರ ಹೇಳಲು ಸಾಧ್ಯ ಎಂದು ಪಾಟಿದಾರ್‌ ಅನಾಮತ್‌ ಆಂದೋಲನದ ನಾಯಕ ಹಾರ್ದಿಕ್ ಪಟೇಲ್‌ ಗೇಲಿ ಮಾಡಿದ್ದಾರೆ.

“बेरोज़गार युवा को पकौडे का ठेला लगाने का सुझाव एक चायवाला ही दे सकता है, अर्थशास्त्री एसा सुझाव नहीं देता !!!!,” (ನಿರುದ್ಯೋಗಿ ಯುವಕರು ಕುರುಕಲು ತಿಂಡಿ ಮಾರಾಟ ಮಾಡಿ ಎಂದು ಚಹಾ ಮಾರಾಟಗಾರ ಮಾತ್ರ ಹೇಳಬಲ್ಲ. ಅರ್ಥಶಾಸ್ತ್ರಜ್ಞರು ಎಂದೂ ಹೀಗೆ ಹೇಳುವುದಿಲ್ಲ) ಎಂದು ಹಾರ್ದಿಕ್‌ ಟ್ವೀಟ್‌ ಮಾಡಿದ್ದಾರೆ.

ಟಿವಿ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ‘ವ್ಯಕ್ತಿಯೊಬ್ಬ ಪ್ರತಿದಿನ ಪಕೋಡಾ ಮಾರಾಟ ಮಾಡಿ 200 ರೂ ಗಳಿಸುತ್ತಾನೆ ಎಂದಾದರೆ ಅದನ್ನು ಉದ್ಯೋಗ ಎಂದು ಪರಿಗಣಿಸಬೇಕೆ? ಬೇಡವೆ?’ ಎಂದು ಪ್ರಶ್ನಿಸಿದ್ದರು.

ಇಂತಹ ಸಾಂದರ್ಭಿಕ ಮಾತುಗಳನ್ನೇ ಎತ್ತಿಕೊಂಡು ಪ್ರಧಾನಿ ಮೋದಿ ಅವರನ್ನು ರಾಜಕೀಯ ಎದುರಾಳಿಗಳು ಟೀಕಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಯುವ ಕಾಂಗ್ರೆಸ್‌ ಘಟಕ ಪ್ರಧಾನಿಯವರ ಬಾಲ್ಯದ ಬದುಕನ್ನು ನೆನಪಿಸುತ್ತ ‘ಚಹಾ ಮಾರಾಟಗಾರ’ನೆಂದು ಗೇಲಿ ಮಾಡಿತ್ತು. ಅದಕ್ಕೆ ದೇಶಾದ್ಯಂತ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.

Comments are closed.