ರಾಷ್ಟ್ರೀಯ

ಮತ್ತೊಂದು ದೇವಸ್ಥಾನಕ್ಕೆ ಭೇಟಿ ನೀಡಿ ಅಪಹಾಸ್ಯಕ್ಕೆ ಒಳಗಾದ ರಾಹುಲ್ ಗಾಂಧಿ

Pinterest LinkedIn Tumblr


ಖೇಡಾ: ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನ ಬಾಕಿ ಇರುವಂತೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದ ಮತ್ತೊಂದು ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಖೇಡಾ ಜಿಲ್ಲೆಯ ಡಾಕೋರ್‌ನಲ್ಲಿರುವ ಶ್ರೀ ರಾಂಚೋಡ್‌ಜೀ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ ರಾಹುಲ್, ಪ್ರಾರ್ಥನೆ ಸಲ್ಲಿಸಿ, ಮರಳಿದರು. ದೇವಾಲಯದ ಹೊರಗಡೆ ನೆರೆದಿದ್ದ ಜನಸಮೂಹ ರಾಹುಲ್ ಅವರು ಬರುತ್ತಿದ್ದಂತೆ ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಇದರಿಂದ ಮುಜುಗರಕ್ಕೀಡಾದ ಕೈ ಉಪಾಧ್ಯಕ್ಷ ಲಗುಬಗೆಯಿಂದ ಕಾರು ಹತ್ತಿ ಅಲ್ಲಿಂದ ಕಾಲ್ಕಿತ್ತರು. ಈ ವೀಡಿಯೋ ಈಗ ವೈರಲ್ ಆಗಿದೆ.

ಏತನ್ಮಧ್ಯೆ, ರಾಹುಲ್ ಅವರು ಖೇಡಾ, ಬನಸ್ಕಾಂತ, ಅರಾವಳಿ ಮತ್ತು ಗಾಂಧಿನಗರದಲ್ಲಿ ನಾಲ್ಕು ರ‍್ಯಾಲಿಗಳನ್ನು ನಡೆಸಿ, ಬಳಿಕ ಮತ್ತೊಂದು ದೇವಸ್ಥಾನದಲ್ಲಿ( ಶಾಮಲಾಜಿ) ಪ್ರಾರ್ಥನೆ ಸಲ್ಲಿಸಲಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗುತ್ತಿದ್ದಂತೆ, ಗಾಂಧಿಯವರು ದೇವಸ್ಥಾನ ಸುತ್ತತೊಡಗಿದ್ದಾರೆ. ಇದಕ್ಕೆ ವಿರೋಧ ಪಕ್ಷಗಳಿಂದ ತೀವ್ರ ಅಪಹಾಸ್ಯಕ್ಕೆ ಒಳಗಾಗುತ್ತಿದ್ದಾರೆ.

Comments are closed.