ಉತ್ತರಪ್ರದೇಶದ ಬರೇಲಿಯ ಗಂಡನೊಬ್ಬ ತನ್ನ ಪತ್ನಿಗೆ ‘ತ್ರಿವಳಿ ತಲಾಖ್’ ಹೇಳಿದ್ದಾನೆ; ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿಯಲ್ಲಿ ಭಾಗವಹಿಸಿದ್ದಕ್ಕೆ ಗಂಡ ತಲಾಖ್ ನೀಡಿದ್ದಾನೆ ಎಂದು ಮಹಿಳೆಯೊಬ್ಬಳು ದೂರಿದ್ದಾಳೆ.
ಆದರೆ ಪತ್ನಿಗೆ ಅನೈತಿಕ ಸಂಬಂಧವಿರುವುದೇ ತಲಾಖ್ಗೆ ಕಾರಣ ಎಂದು ಗಂಡ ಹೇಳಿಕೊಂಡಿದ್ದಾನೆ. ಗಂಡನಿಗೇ ತನ್ನ ಚಿಕ್ಕಮ್ಮನ ಜತೆ ಅನೈತಿಕ ಸಂಬಂಧವಿದ್ದು, ಡೈವೋರ್ಸ್ ನೀಡುವುದಾಗಿ ಹೇಳುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ.
ಮಾಜಿ ಕೇಂದ್ರ ಸಚಿವ ಮುಖ್ತರ್ ಅಬ್ಬಾಸ್ ನಖ್ವಿ ಅವರ ಸಹೋದರಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಫಹಾತ್ ನಖ್ವಿ ಈ ಮಹಿಳೆಯ ನೆರವಿಗೆ ಧಾವಿಸಿದ ಬಳಿಕ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Comments are closed.