ರಾಷ್ಟ್ರೀಯ

ಬಾಬ್ರಿ ಧ್ವಂಸ: ಜಿಹಾದಿಗಳಾಗಲು ಅಲ್‌ ಖಾಯಿದಾ ಕರೆ

Pinterest LinkedIn Tumblr


ಹೊಸದಿಲ್ಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 25ವರ್ಷ ಸಂದ ಬೆನ್ನಲ್ಲೇ, ಅಲ್‌ ಖಾಯಿದಾ ಉಗ್ರ ಸಂಘಟನೆ ಭಾರತೀಯ ಮುಸ್ಲಿಮರಿಗೆ ಜಿಹಾದಿಗಳಾಗುವಂತೆ ಕರೆ ನೀಡಿದೆ.

”ಶತ್ರುಗಳು ಯುದ್ಧಕ್ಕೆ ಸಜ್ಜಾಗುತ್ತಿದ್ದಾರೆ. ಪ್ರತಿಯೊಬ್ಬ ಮುಸ್ಲಿಮರೂ ಮನೆಗಳನ್ನು ತೊರೆದು ಜಿಹಾದಿಗಳಾಗಲು ಸಜ್ಜಾಗಬೇಕು. ಎಲ್ಲಾ ಮುಸ್ಲಿಮರನ್ನೂ ಹೊಸಕಿಹಾಕುವವರೆಊ ಹಿಂದೂಗಳು ಕಾರ್ಯತಂತ್ರ ಬದಲಿಸುತ್ತಲೇ ಇರುತ್ತಾರೆ. ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಪ್ರಿಯೊಬ್ಬ ಮುಸ್ಲಿಮರನ್ನೂ ನಾಶಪಡಿಸುವುದು ಹಿಂದೂಗಳ ಗುರಿ. ಹೀಗಾಗಿ, ಮುಸ್ಲಿಮರು ತ್ವರಿತವಾಗಿ ಯುದ್ಧ ಎದುರಿಸಲು ಸಜ್ಜಾಗಬೇಕು,” ಎಂದು ಸಂಘಟನೆಯ ಆನ್‌ಲೈನ್‌ ಫೀಡ್‌ನಲ್ಲಿ ಬಿಡುಗಡೆ ಮಾಡಲಾದ ಆಡಿಯೋ ಸಂದೇಶದಲ್ಲಿ ಕರೆ ನೀಡಲಾಗಿದೆ. ಸುಲ್ತಾನ್‌ ಜಾಬುನ್‌ ಅಲ್‌ ಹಿಂದಿ ಎಂಬ ವ್ಯಕ್ತಿಯ ಹೆಸರಿನಲ್ಲಿ ಈ ಕರೆ ನೀಡಲಾಗಿದೆ.

ಪ್ರಜಾಪ್ರಭುತ್ವಕ್ಕೆ ವಿರೋಧ: ಪ್ರಜಾಸತಾತ್ಮಕ ರಾಜಕೀಯದ ವಿರುದ್ಧ ಸಂದೇಶದಲ್ಲಿ ಧ್ವನಿ ಎತ್ತಲಾಗಿದೆ.

”ಕಾಂಗ್ರೆಸ್‌, ಬಿಜೆಪಿ, ಡಿಎಂಕೆ, ಸಮಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್‌, ಬಹುಜನ ಸಮಾಜ ಪಕ್ಷ ಇವರೆಲ್ಲರ ಬಗ್ಗೆ ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು. ಇವೆಲ್ಲವೂ ನಿರಂಕುಶ ಪ್ರಭುತ್ವದ ವಿವಿಧ ಮುಖಗಳಷ್ಟೇ.ನಿಮ್ಮೆಲ್ಲರಿಗೂ ಏಕೈಕ ಮತ್ತು ಅಂತಿಮ ಪರಿಹಾರವೆಂದರೆ, ಅದು ಅಲ್ಲಾಹ್‌ ನೇತೃತ್ವದ ಷರಿಯಾ ಆಡಳಿತ,” ಎಂದು ಸಂದೇಶದಲ್ಲಿ ಹೇಳಲಾಗಿದೆ.

ಈ ಆಡಿಯೋ ಸಂದೇಶವನ್ನು ವಿಶ್ಲೇಷಣೆ ಮಾಡಿರುವ ಗುಪ್ತಚರ ಇಲಾಖೆ ಅಧಿಕಾರಿಗಳು, ಇದು ಇತ್ತೀಚೆಗೆ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆಯಿಂದ ವಿಭಜನೆಗೊಂಡು, ಅಲ್‌ ಖಾಯಿದಾದ ಕಾಶ್ಮೀರಿ ಘಟಕದ ಹೆಸರಲ್ಲಿ ತಲೆ ಎತ್ತಿದ ಹೊಸ ಸಂಘಟನೆಯದ್ದೇ ಇರಬಹುದು ಎಂದಿದ್ದಾರೆ.

ಬಾಬ್ರಿ ಧ್ವಂಸ ಪ್ರಕರಣದ 25ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ, ಮುಸ್ಲಿಂ ಸಮುದಾಯವನ್ನು ಪ್ರಚೋದಿಸುವುದು ಇದರ ಹಿಂದಿನ ಉದ್ದೇಶವಿರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.

ಹೊರ ದೇಶದಿಂದ ಈ ಸಂದೇಶವನ್ನು ಕಳುಹಿಸಲಾಗಿದೆ ಎಂದು ಅದರಲ್ಲಿ ಬಿಂಬಿಸಲಾಗಿದ್ದು, ಕಾಶ್ಮೀರದಲ್ಲೇ ಈ ಆಡಿಯೋ ಸಂದೇಶದ ಧ್ವನಿ ಮುದ್ರಣ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Comments are closed.