ಹೊಸದಿಲ್ಲಿ: ದೀಪಾವಳಿ ಸಂಭ್ರಮ ಮುಗಿಯುತ್ತಿದ್ದಂತೆ ರಾಷ್ಟ್ರರಾಜಧಾನಿಯಲ್ಲಿ ಕಳ್ಳರು ಭಾರೀ ಕರಾಮತ್ತು ನಡೆಸಿದ್ದು, ಸಿನಿಮೀಯವಾಗಿ ಐವರು ದರೋಡೆಕೋರರು 2 ಚಿನ್ನಾಭರಣ ತಯಾರಿಕಾ ಘಟಕಗಳಿಂದ ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಲೂಟಿಗೈದಿದ್ದಾರೆ.
ಕರೋಲ್ ಭಾಗ್ ಪ್ರದೇಶದ ಘಟಕಗಳಿಗೆ ಅಕ್ಟೋಬರ್ 20 ರ ರಾತ್ರಿ 1 ಗಂಟೆಯ ವೇಳೆಗೆ ಗ್ಯಾಸ್ ಕಟ್ಟರ್ ಬಳಸಿ ಗೋಡೆಗಳಿಗೆ ಕನ್ನಕೊರೆದು ನುಗ್ಗಿದ ಐವರು ನಡೆಸಿರುವ ಭಾರೀ ದರೋಡೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪೊಲೀಸರು ಸœಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಸಾದ್ ನಗರ ಠಾಣೆಯಲ್ಲಿ 2 ಎಫ್ಐಆರ್ಗಳನ್ನು ದಾಖಲಿಸಲಾಗಿದೆ. ತಂಡಗಳನ್ನು ರಚಿಸಿ ಆರೋಪಿಗಳ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.
– ಉದಯವಾಣಿ
Comments are closed.