ಬದೌನ್: ಯುವಕನೊಬ್ಬ 500 ರುಪಾಯಿ ನೀಡಲು ನಿರಾಕರಿಸಿದ 50 ವರ್ಷದ ತನ್ನ ತಂದೆಯನ್ನೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಬದೌನ್ ನ ಮುಸಾಜಾಗ್ ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ನಿನ್ನೆ ಮುಸಾಜಾಗ್ ಪ್ರದೇಶದ ಹತಿನಿಮೂಡ್ ಗ್ರಾಮದಲ್ಲಿ ಇಶಾಖ್ 500 ರುಪಾಯಿ ನೀಡಲು ನಿರಾಕರಿಸಿದ ತನ್ನ ತಂದೆ ಇರ್ಷಾದ್ ನನ್ನು ಕಬ್ಬಿಣದ ರಾಡ್ ನಿಂದ ಹೊಡೆದು ಸಾಯಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಗ ಮಾನಸಿಕ ರೋಗಿಯಾಗಿದ್ದು, ಬರೇಲಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಅವರು ತಿಳಿಸಿದ್ದಾರೆ.
ರಾಷ್ಟ್ರೀಯ
Comments are closed.