ರಾಷ್ಟ್ರೀಯ

ಅಖಿಲೇಶ್ ಮುಂದಿನ ಮುಖ್ಯಮಂತ್ರಿ: ಮುಲಾಯಂ ಸಿಂಗ್

Pinterest LinkedIn Tumblr


ಲಕ್ನೋ (ಫೆ.06): ಚುನಾವಣಾ ದಿನ ಸಮೀಸುತ್ತಿದ್ದಂತೆ ತಮ್ಮ ಕುಟುಂಬ ಹಾಗೂ ಪಕ್ಷದಲ್ಲಿ ಉದ್ಭವಿಸಿರುವ ಬಿಕ್ಕಟ್ಟಿಗೆ ಸಂಬಂಧಿಸಿ ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್ ಮೌನ ಮುರಿದಿದ್ದಾರೆ.
ನಮ್ಮ ಕುಟುಂಬದಲ್ಲಿ ಅಥವಾ ಪಕ್ಷದಲ್ಲಿ ಯಾವುದೇ ಕಲಹಗಳಿಲ್ಲ; ನಾನು ನಾಳೆಯಿಂದ ಚುನಾವಣಾ ಪ್ರಚಾರದಲ್ಲಿ ತೊಡಗುತ್ತಿದ್ದೇನೆ, ರಾಜ್ಯದ ಮುಂದಿನ ಮುಖ್ಯಮಂತ್ರಿ ಅಖಿಲೇಶ್ ಅವರೇ ಆಗುತ್ತಾರೆ ಎಂದು ಮುಲಾಯಂ ಹೇಳಿದ್ದಾರೆ.
ಪಕ್ಷದ ಬಗ್ಗೆ ಅಮರ್ ಸಿಂಗ್ ಅವರಿಗೂ ಯಾವುದೇ ಮುನಿಸಿಲ್ಲ, ಅಖಿಲೇಶ್’ಗೆ ಕೆಲಸ ಮಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಹೇಳಿರುವ ಮುಲಾಯಂ, ಸಮಾಜವಾದಿ-ಕಾಂಗ್ರೆಸ್ ಮೈತ್ರಿಕೂಟ ಪರವಾಗಿ ಪ್ರಚಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಫೆ.11ರಂದು ಉತ್ತರ ಪ್ರದೇಶ ವಿಧಾನಸಭೆಗೆ ಮೊದಲ ಹಂತದ ಮತದಾನಗಳು ನಡೆಯಲಿವೆ.

Comments are closed.