ರಾಷ್ಟ್ರೀಯ

ಜಲ್ಲಿಕಟ್ಟು: ಇಬ್ಬರು ಬಲಿ; 28 ಮಂದಿ ಗಾಯ

Pinterest LinkedIn Tumblr


ಮಧುರೈ: ಜಲ್ಲಿಕಟ್ಟು ಸ್ಪರ್ಧೆಯಲ್ಲಿ ಹೋರಿಯನ್ನು ಪಳಗಿಸುವ ಸಾಹಸದಲ್ಲಿ ಇಬ್ಬರು ದುರಂತ ಸಾವುಕಂಡಿದ್ದು, 28 ಮಂದಿ ಗಾಯಗೊಂಡ ಘಟನೆ ತಮಿಳುನಾಡಿನಲ್ಲಿ ಭಾನುವಾರ ಸಂಭವಿಸಿದೆ. ಇನ್ನು ಮಧುರೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಒಬ್ಬ ನಿರ್ಜಲೀಕರಣದಿಂದ ಮೃತಪಟ್ಟಿದ್ದಾರೆ.

ತಮಿಳುನಾಡಿನ ಪುದುಕೊಟ್ಟೈ ಜಿಲ್ಲೆಯ ರಾಪೊಸಲ್‌ನಲ್ಲಿ ಆಯೋಜಿಸಿದ್ದ ಸ್ಪೆರ್ಧೆಯಲ್ಲಿ ಹೋರಿಯನ್ನು ಪಳಗಿಸಲು ಯತ್ನಿಸಿದ್ದ ವ್ಯಕ್ತಿಗಳನ್ನು ಹೋರಿಯು ಕೊಂಬಿನಿಂದ ಚಿಮ್ಮಿ ಎಸೆದಿದ್ದು, ಇಬ್ಬರು ಸಾವಿಗೀಡಾಗಿದ್ದಾಗಿ ವರದಿಯಾಗಿದೆ.

ಜಲ್ಲಿಕಟ್ಟು ಆಚರಣೆಗೆ ಸುಗ್ರೀವಾಜ್ಞೆ ಸಾಲದು; ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿ ಮಧುರೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಒಬ್ಬ ನಿರ್ಜಲೀಕರಣಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‍ಪುದುಕೊಟ್ಟೈನಲ್ಲಿ ಸ್ಪರ್ಧೆ ವೇಳೆ ಗಾಯಗೊಂಡವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

Comments are closed.