ರಾಷ್ಟ್ರೀಯ

ಮಗನ ಮದುವೆಗೆ ಹಣ ಡ್ರಾ ಮಾಡಲು ಸಾಧ್ಯವಾಗದ ಕಾರಣ ರೈತ ಆತ್ಮಹತ್ಯೆ

Pinterest LinkedIn Tumblr

sucuideಮುಜಾಫರನಗರ: ತನ್ನ ಮಗನ ಮದುವೆಗೆ ಹಣ ಡ್ರಾ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ 48 ವರ್ಷದ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಮುಜಾಫರನಗರ ಜಿಲ್ಲೆಯ ಸಧ್ಪುರ ಗ್ರಾಮದಲ್ಲಿ ನಡೆದಿದೆ.
ಸತಿಶ್ ಕುಮಾರ್ ಎಂಬುವವರು ಮಗನ ಮದುವೆಗೆ ಬ್ಯಾಂಕ್ ನಿಂದ ಹಣ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ ಸೇವಿಸಿದ್ದ ಸತೀಶ್ ಕುಮಾರ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಸ್ಪತ್ರೆ ತಲುಪುವ ವೇಳೆಗೆ ಮೃತಪಟ್ಟಿದ್ದಾರೆ.
ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಂತರೂ ಮದುವೆಗೆ ಬೇಕಾಗುವಷ್ಟು ಹಣ ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಬಹಳ ನೊಂದಿದ್ದರು ಎಂದು ಸತೀಶ್ ಕುಮಾರ್ ಕುಟುಂಬದವರು ತಿಳಿಸಿದ್ದಾರೆ.

Comments are closed.