ರಾಷ್ಟ್ರೀಯ

ಕೂದಲೆಳೆಯಲ್ಲಿ ಕಾರು ಅಪಘಾತದಿಂದ ಪಾರಾದ ವೈಎಸ್ ಜಗನ್ ಮೋಹನ್

Pinterest LinkedIn Tumblr

jaganಹೈದರಾಬಾದ್: ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಚಲಿಸುತ್ತಿದ್ದ ಕಾರು ಪಂಕ್ಚರ್ ಆಗಿ ತನ್ನ ದಿಕ್ಕು ಬದಲಿಸಿ ಪೊದೆಗೆ ಹೋಗಿ ಗುದ್ದಿ ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಆಂಧ್ರ ಪ್ರದೇಶದ ಕರ್ನೂಲಿನಿಂದ ಹೈದರಾಬಾದಿಗೆ ಬರುತ್ತಿದ್ದಾಗ ಜಗನ್ ಮತ್ತವರ ಬೆಂಬಲಿಗರು ಕಾರಿನಲ್ಲಿ ಶಂಶಬಾದ್ ಮಂಡಲ್ ನಲ್ಲಿನ ಪಲಮಕುಲ ತಲುಪಿದ್ದರು. ಆಗ ಕಾರಿನ ಒಂದು ಚಕ್ರ ಪಂಕ್ಚರ್ ಆಯಿತು. ಚಾಲಕ ಕೂಡಲೇ ಬ್ರೇಕ್ ಹಾಕಿದರು. ಆಗ ಕಾರು ರಸ್ತೆ ಬಿಟ್ಟು ಬದಿಯ ಪೊದೆಗೆ ಹೋಗಿ ಗುದ್ದಿತು.
ಚಾಲಕರ ಸಮಯ ಪ್ರಜ್ಞೆಯಿಂದಾಗಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಜಗನ್ ಮೋಹನ್ ಅವರು ಕೂದಳೆಲೆ ಅಂತರದಲ್ಲಿ ಅಪಘಾತದಿಂದ ಪಾರಾಗುವುದು ಇದು ಎರಡನೇ ಸಲ. ಈ ಮೊದಲು ಆಂಧ್ರದ ಪ್ರಕಾಶಂ ಜಿಲ್ಲೆಗೆ ಹೋಗುತ್ತಿದ್ದಾಗ ಜಗನ್ ಅವರ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿತ್ತು. ಆಗಲೂ ಜಗನ್ ಅವರು ಯಾವುದೇ ಗಾಯಗಳಾಗದೆ ಬಚಾವಾಗಿದ್ದರು.

Comments are closed.