ರಾಷ್ಟ್ರೀಯ

ಎಸ್ ಪಿಯಿಂದ ಅಖಿಲೇಶ್ ಆಪ್ತನ ಉಚ್ಚಾಟನೆ

Pinterest LinkedIn Tumblr

akilesh-yadavಲಖನೌ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಳಗಿನ ಬಿಕ್ಕಟ್ಟು ಮುಂದುವರಿದಿದ್ದು, ಇಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಆಪ್ತರೊಬ್ಬರನ್ನು ಉಚ್ಚಾಟಿಸಲಾಗಿದೆ.

ಅಖಿಲೇಶ್ ಅವರ ಆಪ್ತ ತೇಜ್ ನರಾಯಿನ್ ಪಾಂಡೆ ಅಲಿಯಾಸ್ ಪವನ್ ಪಾಂಡೆ ಅವರನ್ನು ಸಮಾಜವಾದಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಶಿವಪಾಲ್ ಯಾದವ್ ಬುಧವಾರ ಉಚ್ಚಾಟನೆ ಮಾಡಿದ್ದಾರೆ.

ಪವನ್ ಪಾಂಡೆ ಅವರನ್ನು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಿವಪಾಲ್ ಹೇಳಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಅಖಿಲೇಶ್ ಅವರು ರಾಜ್ಯಪಾಲ ರಾಮ್ ನಾಯಕ್ ಅವರನ್ನು ಭೇಟಿಯಾಗಿದ್ದಾರೆ.

ಆದರೆ ಇದು ಅನೌಪಚಾರಿಕ ಭೇಟಿಯಾಗಿತ್ತು. ನಾಯಕ್ ಅವರು ದೀಪಾವಳಿ ಹಬ್ಬದಾಚರಣೆ ವೇಳೆ ರಾಜ್ಯದಿಂದ ಹೊರಗಿರುತ್ತಾರೆ. ಆದ ಕಾರಣ ಅವರಿಗೆ ಶುಭಾಶಯವನ್ನು ಕೋರುವುದಕ್ಕಾಗಿ ಅಖಿಲೇಶ್ ಭೇಟಿಯಾಗಿದ್ದರು ಎಂದು ರಾಜಭವನದ ವಕ್ತಾರರು ಹೇಳಿದ್ದಾರೆ.

ಆದಾಗ್ಯೂ, ಅಖಿಲೇಶ್ ರಾಜ್ಯಪಾಲರನ್ನು ದಿಢೀರ್ ಭೇಟಿ ಮಾಡಿದ್ದು, ರಾಜಕೀಯ ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿಸಿತ್ತು .

Comments are closed.