ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಚಿಕ್ಕಪ್ಪ ಶಿವಪಾಲ್ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ಬೆನ್ನಲ್ಲೇ ಶಿವಪಾಲ್ ಮತ್ತು ಅಖಿಲೇಶ್ ನಡುವಿನ ವಾಕ್ಸಮರ ತಾರಕ್ಕೇರಿದೆ.
ಮಂಗಳವಾರ ಸಮಾಜವಾದಿ ಪಕ್ಷದ ಸಭೆಯಲ್ಲಿ ಭಾಗವಹಿಸಿದ ಶಿವಪಾಲ್, ಅಖಿಲೇಶ್ ಯಾದವ್ ಒಬ್ಬ ಸುಳ್ಳುಗಾರ. ಅವರು ಸಮಾಜವಾದಿ ಪಕ್ಷವನ್ನು ಹೋಳು ಮಾಡಿ ಹೊಸ ಪಕ್ಷ ರಚಿಸುತ್ತಾರೆ ಎಂದು ಆರೋಪಿಸಿದ್ದಾರೆ.
ಸಭೆಯಲ್ಲಿ ಅಖಿಲೇಶ್ ಅವರು, ಶಿವಪಾಲ್ ಸಿಂಗ್ ಅವರನ್ನು ಕೈ ಬಿಟ್ಟಿರುವ ನಿರ್ಧಾರದ ಬಗ್ಗೆ ವಿವರಿಸುತ್ತಿದ್ದಾಗ ಕುಪಿತರಾದ ಶಿವಪಾಲ್ ಅಖಿಲೇಶ್ ಅವರ ಕೈಯಿಂದ ಮೈಕ್ ಕಿತ್ತು ತೆಗೆದ ಘಟನೆಯೂ ನಡೆದಿದೆ.
ಈ ನಡುವೆ, ಸಭಿಕರಲ್ಲೊಬ್ಬರು ಶಿವಪಾಲ್ ಅವರು ತಮ್ಮ ವೈಯಕ್ತಿಕ ಕಾರ್ಯಕ್ಕಾಗಿ ಸರ್ಕಾರದ ಹೆಲಿಕಾಪ್ಟರ್ ಬಳಸಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಪಾಲ್, ಹೆಲಿಕಾಪ್ಟರ್ ನಿಮ್ಮಪ್ಪನದ್ದಾ? ನಾನು ಸಚಿವನಾಗಿದ್ದೆ ಎಂದು ಉತ್ತರಿಸಿದ್ದಾರೆ.
ಶಿವಪಾಲ್ ಮತ್ತು ಅಖಿಲೇಶ್ ನಡುವಿನ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಮುಲಾಯಂ ಸಿಂಗ್ ಅವರು ಪ್ರಯತ್ನಿಸಿದರೂ ಅದು ಅವರಿಗೆ ಸಾಧ್ಯವಾಗಲಿಲ್ಲ,
Comments are closed.