ಪಾಟ್ನಾ: ಕಳೆದ ತಿಂಗಳು ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸೀಮಿತ ದಾಳಿಯ ಕೀರ್ತಿ ಯೋಧರಿಗೆ ಸಲ್ಲಬೇಕು ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಸೀಮಿತ ದಾಳಿ ನಡೆಸಿದ ಕೀರ್ತಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕಾಗಲಿ ಅಥವಾ ಪ್ರಧಾನಿ ನರೇಂದ್ರ ಮೋದಿ ಅವರಿಗಾಗಲಿ ಸಲ್ಲುವಂತಿಲ್ಲ, ಸಲ್ಲಬೇಕಿರುವ ಕೀರ್ತಿ ಭಾರತೀಯ ಸೇನೆಗೆ ಎಂದು ಲಾಲು ಪ್ರಸಾದ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ.
ಸೆ.29 ರಂದು ನಡೆದ ಸೀಮಿತ ದಾಳಿಯ ಕೀರ್ತಿಯನ್ನು ಪಡೆಯಲು ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಇದೆ ಮೊದಲ ಬಾರಿಗೆ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿರುವುದು ಎಂಬುದು ಸುಳ್ಳು, ಈ ಹಿಂದೆಯೂ ಸಹ ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದೆ. ಬಿಜೆಪಿ ಸೀಮಿತ ದಾಳಿಯ ಕೀರ್ತಿ ಪಡೆಯಲು ಯತ್ನಿಸುವ ಮೂಲಕ ತನ್ನನ್ನು ತಾನೇ ಬಯಲು ಮಾಡಿಕೊಂಡಿದೆ ಎಂದು ಲಾಲು ಪ್ರಸಾದ್ ಯಾದವ್ ಟೀಕಿಸಿದ್ದಾರೆ.
ರಾಷ್ಟ್ರೀಯ
Comments are closed.