ರಾಷ್ಟ್ರೀಯ

ನಕ್ಸಲ್ ರಿಂದ ಐಐಡಿ ಸ್ಫೋಟ: ಯೋಧನ ಸಾವು

Pinterest LinkedIn Tumblr

1-Naxalರಾಯ್ಬುರ: ಛತ್ತೀಸ್ಗಢದ ನಾರಾಯಣಪುರದಲ್ಲಿ ನಕ್ಸಲರು ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಸ್ಫೋಟಗೊಳಿಸಿದ್ದು, ಪರಿಣಾಮ ಜಿಲ್ಲಾ ಮೀಸಲು ಗುಂಪಿನ (ಡಿಆರ್’ಜಿ) ಯೋಧನೊಬ್ಬ ಸಾವನ್ನಪ್ಪಿ ಇಬ್ಬರಿಗೆ ಗಾಯವಾಗಿರುವ ಘಟನೆ ಬುಧವಾರ ನಡೆದಿದೆ.
ಅಕಾಬೆಡಾ ಗ್ರಾಮದ ಅಬುರ್ಮಾದ್ ಪ್ರದೇಶದಲ್ಲಿ ಸಾರ್ವಜನಿಕರಿಗಾಗಿ ಶಿಬಿರವೊಂದನ್ನು ಆರಂಭಿಸಲಾಗಿತ್ತು. ಸಾರ್ವಜನಿಕರು ಆಗಮಿಸುವುದರಿಂದ ಸ್ಥಳದಲ್ಲಿ ಭದ್ರತೆ ನೀಡಲು ಜಿಲ್ಲಾ ಮೀಸಲು ಗುಂಪಿನ (ಡಿಆರ್’ಜಿ) ಯೋಧರನ್ನು ನೇಮಿಸಲಾಗಿತ್ತು.
ಇದರಂತೆ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿ ಪ್ರದೇಶದ ಬಳಿ ಡಿಆರ್ ಜಿ ಯೋಧರು ಭದ್ರತೆಯನ್ನು ನೀಡುತ್ತಿದ್ದರು. ಈ ವೇಳೆ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ಬಳಿಕ ಕೆಲ ಗಂಟೆಗಳ ಕಾಲ ಮಾವೋವಾದಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಮಾವೋವಾದಿಗಳು ಅರಣ್ಯದಲ್ಲಿ ಅಡಗಿಕುಳಿತಿದ್ದು, ಯೋಧರು ಕಾರ್ಯಾಚರಣೆಗಿಳಿದಿದ್ದಾರೆಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.