ರಾಷ್ಟ್ರೀಯ

ತೃಣಮೂಲ ಕಾಂಗ್ರೆಸ್ ಗೆ ಸೇರಿದ ತ್ರಿಪುರಾದ 6 ಕಾಂಗ್ರೆಸ್ ಶಾಸಕರು

Pinterest LinkedIn Tumblr

tripuraಅಗರ್ತಲಾ: ತ್ರಿಪುರದಲ್ಲಿ ಕಾಂಗ್ರೆಸ್ ಪಕ್ಷದ 6 ಶಾಸಕರು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಕಾಂಗ್ರೆಸ್ ಶಾಸಕರು ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದರ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ವಿಧಾನಸಭಾಧ್ಯಕ್ಷ ರಾಮೇಂದ್ರ ಚಂದ್ರ ದೇವ್ ನಾಥ್, ಕಾಂಗ್ರೆಸ್ ನ ಸುದೀಪ್ ರಾಯ್ ಬರ್ಮಾನ್ ಹಾಗೂ ಅವರೊಂದಿಗೆ ಇನ್ನು ೩ ಶಾಸಕರು ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿರುವುದಾಗಿ ಪತ್ರ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ವಿಧಾನಸಭಾಧ್ಯಕ್ಷರಿಗೆ ನೀಡಲಾಗಿರುವ ಪತ್ರದಲ್ಲಿ ಕಾಂಗ್ರೆಸ್ ನ 6 ಶಾಸಕರ ಸಹಿ ಇದ್ದು, 6 ಶಾಸಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ, ನಿಯಮಗಳನ್ನು ಪರಿಶೀಲಿಸಿ ಎರಡು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ರಾಮೇಂದ್ರ ಚಂದ್ರ ದೇವ್ ನಾಥ್ ತಿಳಿಸಿದ್ದಾರೆ.
ಸುದೀಪ್ ರಾಯ್ ಬರ್ಮಾನ್ ಅವರೊಂದಿಗೆ ಬಿಸ್ವಬಂಧು ಸೇನ್, ದಿಬ ಚಂದ್ರ, ಪ್ರಣ್ಜಿತ್ ಸಿಂಘ ರಾಯ್ ಹಾಗೂ ದಿಲೀಪ್ ಸರ್ಕಾರ್ ತೃಣಮೂಲ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿರುವ ಶಾಸಕರಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಪಕ್ಷ ಎಡಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸುದೀಪ್ ರಾಯ್ ಬರ್ಮಾನ್ ಕಾಂಗ್ರೆಸ್ ಪಕ್ಷ ತೊರೆದಿದ್ದರು.

Comments are closed.