ಪಣಜಿ: ರಾಜ್ಯಕ್ಕೆ ನೈಜೇರಿಯಾ ಪ್ರವಾಸಿಗರ ಅಗತ್ಯವಿಲ್ಲ ವಾದ್ದರಿಂದ ಅವರ ಪ್ರವೇಶಕ್ಕೆ ನಿಷೇಧ ಹೇರಬೇಕು ಎಂದು ಗೋವಾದ ಮಾಜಿ ಮುಖ್ಯಮಂತ್ರಿ ರವಿ ನಾಯಕ್ ಸರಕಾರವನ್ನು ಒತ್ತಾಯಿಸಿದ್ದಾರೆ.
ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಸಿಎಂ ರವಿ ನಾಯಕ್ ಮಾತನಾಡಿ, ನೈಜೇರಿಯಾ ಮೂಲದ ನಿಗ್ರೋಗಳಿಂದ ಗೋವಾ ಜನತೆಗೆ ತೀವ್ರ ತೊಂದರೆಗಳಾಗುತ್ತಿವೆ ಎಂದು ತಿಳಿಸಿದ್ದಾರೆ.
ಭಾರತ ಸರಕಾರ ನೈಜೇರಿಯಾ ಪ್ರದೇಶಗಳು ದೇಶಕ್ಕೆ ಪ್ರವೇಶಿಸುವುದನ್ನು ನಿಷೇಧಿಸಬೇಕು. ನಿಗ್ರೋಗಳು ಅಧ್ಯಯನಕ್ಕಾಗಿ ಅಥವಾ ಪಿಕನಿಕ್ ಅಥವಾ ಡ್ರಗ್ಸ್ ಮಾರಾಟ ಮಾಡಲು ಬರುತ್ತಿದ್ದಾರೆಯೇ ಎನ್ನುವುದನ್ನು ಸರಕಾರ ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಗ್ರೋಗಳು ದೇಶದ ಎಲ್ಲಾ ರಾಜ್ಯಗಳಲ್ಲಿ ಗುಂಡಾಗಿರಿ ಮಾಡುತ್ತಿದ್ದಾರೆ, ದೆಹಲಿ, ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ. ಅವರು ಯಾವ ಯಾವ ಕಾಲೇಜುಗಳಲ್ಲಿ ಓದುತ್ತಿದ್ದಾರೆ ಎನ್ನುವ ತನಿಖೆ ನಡೆಸಬೇಕು ಎಂದು ಒತ್ತಾಯಸಿದರು.
ಕಳೆದ ಕೆಲ ದಿನಗಳ ಹಿಂದೆ ಆಮ್ ಆದ್ಮಿ ಪಕ್ಷದ ನಾಯಕರೊಂದಿಗೆ ಕೂಡಾ ನಿಗ್ರೋಗಳು ಜಟಾಪಟಿ ನಡೆಸಿದ್ದರು ಎಂದು ಮಾಜಿ ಮುಖ್ಯಮಂತ್ರಿ ರವಿ ನಾಯಕ್ ತಿಳಿಸಿದ್ದಾರೆ.
Comments are closed.