ಕಾನ್ಪುರ: ಮಹಾಭಾರತದಲ್ಲಿ ಯುಧಿಷ್ಟಿರ ಪಗಡೆಯಾಟದ ವೇಳೆ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಮಡದಿ ದ್ರೌಪದಿಯನ್ನೇ ಪಣಕ್ಕಿಟ್ಟಂತೆ ಇಲ್ಲೊಬ್ಬ ಬೆಟ್ಟಿಂಗ್ ಹುಚ್ಚ ಎಲ್ಲವನ್ನೂ ಕಳೆದುಕೊಂಡು ಕೊನೆಗೆ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದಾನೆ! ಇದು ಐಪಿಎಲ್ ಮ್ಯಾಚ್ನ ಮಾಯೆ! ಪೊಲೀಸರು ಈಗ ಆತನನ್ನು ಕೃಷ್ಣ ಜನ್ಮಸ್ಥಾನಕ್ಕೆ ಕಳುಹಿಸಲು ಹುಡುಕುತ್ತಿದ್ದಾರೆ.
ಇದೆಲ್ಲ ವಿಷಯ ಹೆಂಡತಿಗೂ ಗೊತ್ತಿರಲಿಲ್ಲ. ಬೆಟ್ಟಿಂಗ್ನಲ್ಲಿ ಅವಳನ್ನು ಗೆದ್ದವರು ಬಂದು ಕಿರಿಕಿರಿ ಮಾಡಲು ಶುರು ಮಾಡಿದಾಗಲೇ ತಿಳಿದದ್ದು. ಆಕೆ ಸಾಮಾಜಿಕ ಹೋರಾಟಗಾರರ ಮೂಲಕ ಪೊಲೀಸರ ಮೊರೆ ಹೊಕ್ಕಿದ್ದು, ಪ್ರಕರಣ ದಾಖಲಾಗಿದೆ. ಆರೋಪಿ ತಪ್ಪಿಸಿಕೊಂಡಿದ್ದಾನೆ.
ಐದು ವರ್ಷದ ಹಿಂದೆ ಅವರಿಬ್ಬರ ಮದುವೆ ನಡೆದಿತ್ತು. ಫ್ಯಾನ್ಸಿ ಅಂಗಡಿಯ ಮಾಲಕಿಯಾಗಿರುವ ಹೆಂಡತಿಯ ಮೈಯಲ್ಲಿದ್ದ ಚಿನ್ನದ ಮೇಲೆ ಮೊದಲ ದಿನವೇ ಕಣ್ಣು ಹಾಕಿದ್ದ. ಆವನ ಶೇರು ವ್ಯವಹಾರ, ಕುಡುಕತನ, ಬೆಟ್ಟಿಂಗ್ ತಿಳಿದ ಆಕೆ ಕೊಡಲು ನಿರಾಕರಿಸಿದ್ದಳು. ಅದಕ್ಕಾಗಿ ಮನೆಯಲ್ಲಿ ನಿತ್ಯ ಜಗಳ. ಈ ನಡುವೆ ಮನೆಯ ಬೆಲೆ ಬಾಳುವ ವಸ್ತುಗಳನ್ನೆಲ್ಲ ಒಂದೊಂದಾಗಿ ಮಾರಿದ ಆತ ಐಪಿಎಲ್ ಬೆಟ್ಟಿಂಗ್ ಸೋಲ್ತಾ ಇದ್ದ ಹಾಗೆಮನೆಯಲ್ಲೂ ಮಾರಲು ಮುಂದಾಗಿದ್ದ. ಕೊನೆಗೆ ಹೆಂಡತಿಯನ್ನೂ ಪಣಕ್ಕಿಟ್ಟ. ಸೋತ ಬಳಿ ಊರೇ ಬಿಟ್ಟಿದ್ದ. ಇತ್ತ ಅವಳನ್ನು ಗೆದ್ದ ಬೆಟ್ಟಿಗರು ಮನೆಯ ಸುತ್ತ ಠಳಾಯಿಸಲು ಆರಂಭಿಸಿದರು. ಅಪಾಯದ ಅರಿವಾದ ಆಕೆ ಗಂಡನ ಮೇಲೆ ದೂರು ನೀಡಿದಳು.
Comments are closed.