ರಾಷ್ಟ್ರೀಯ

ಕೊಲ್ಲಂ ದೇವಾಲಯದ ಬಳಿ ಪಟಾಕಿ ಘಟಕದ ಮೇಲೆ ದಾಳಿ: 50 ಕೆಜಿ ಪಟಾಕಿ ವಶ

Pinterest LinkedIn Tumblr

crac

ತಿರುವನಂತಪುರಂ: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸಂಭವಿಸಿದ ಪಟಾಕಿ ದುರಂತದ ಹಿನ್ನಲೆಯಲ್ಲಿ ದೇವಾಲಯದ ಬಳಿ ಇದ್ದ ಮತ್ತೊಂದು ಪಟಾಕಿ ಘಟಕದ ಮೇಲೆ ದಾಳಿ ಮಾಡಿದ ಅಂಚುತೆಂಗು ಪೊಲೀಸರು 50 ಕೆಜಿ ಪಟಾಕಿಯನ್ನು ಜಪ್ತಿ ಪಡೆದಿದ್ದಾರೆ.

ಜಾತ್ರೆ ವೇಳೆ ಪುತ್ತಿಂಗಲ್ ದೇವಾಲಯದ ಬಳಿ ಪಟಾಕಿ ಸಿಡಿಸಿದ ಗುತ್ತಿಗೆದಾರನ ಪಟಾಕಿ ಘಟಕದ ಮೇಲೆ ದಾಳಿ ಮಾಡಿದ ಪೊಲೀಸರು 50 ಕೆಜಿ ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ.

ಪಟಾಕಿ ಘಟಕದ ಮಾಲಿಕ ವರ್ಕಲಾ ಕೃಷ್ಣಮೂರ್ತಿ ತಲೆಮರೆಸಿಕೊಂಡಿದ್ದಾನೆ. ಆತನ ಪತ್ನಿ ಅನಾರ್ಕಲಿ ಹೆಸರಲ್ಲಿ ಪರವಾನಗಿ ಪಡೆದಿದ್ದ. ತಯಾರಕ ಘಟಕ ಗೋಡನ್ ನಲ್ಲಿ ಪಟಾಕಿಗಳನ್ನು ಇಡಲಾಗಿತ್ತು. ಅಕ್ರಮವಾಗಿ ಸ್ಫೋಟಕಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು ಎಂಬು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ನಿನ್ನೆ ಮಧ್ನಾಹ್ನ ಪಟಾಕಿ ಘಟಕದ ಮೇಲೆ ದಾಳಿ ಮಾಡಿದ್ದಾರೆ.

15 ಕೆಜಿ ಪಟಾಕಿಗಳನ್ನು ತಯಾರಿಸಲು ಸರ್ಕಾರ ಅನುಮತಿ ನೀಡಿರುತ್ತದೆ. ಆದರೆ, ಇವರು ಕಾನೂನು ಉಲ್ಲಂಘಿಸಿ ಹೆಚ್ಚಿನ ಮಟ್ಟದಲ್ಲಿ ಪಟಾಕಿಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಮುಂಚೆ ಮತ್ತೊಬ್ಬ ಗುತ್ತಿಗೆದಾರನ ಪಟಾಕಿ ಘಟಕದ ಮೇಲೆ ದಾಳಿ ಮಾಡಿದ್ದ ಪೊಲೀಸರು 1,000 ಕೆಜಿ ಪಟಾಕಿಯನ್ನು ವಶಪಡಿಸಿಕೊಂಡಿದ್ದರು.

Write A Comment