ಅಹ್ಮದಾಬಾದ್: ವಕೀಲನೊಬ್ಬ ಬೆಂಕಿ ಹಚ್ಚಿಕೊಂಡು ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರ ಕೋಣೆಯತ್ತ ಓಡಲು ಪ್ರಯತ್ನಿಸಿದ ಘಟನೆ ನಡೆದಿದೆ.
ಸೂರತ್ನ ಕಿಶೋರ್ ಅಗರವಾಲ್ ಎಂಬ ವಕೀಲ ಹೈಕೋರ್ಟ್ ಆವರಣದಲ್ಲಿ ಇದ್ದಕ್ಕಿದ್ದಂತೇ ಬೆಂಕಿ ಹಚ್ಚಿಕೊಂಡು ಮುಖ್ಯ ನ್ಯಾಯಮೂರ್ತಿ ಕೊಠಡಿಯತ್ತ ಓಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಇತರ ವಕೀಲರು ಆತನನ್ನು ತಡೆದು ಬೆಂಕಿ ನಂದಿಸಿದ್ದಾರೆ. ಅಗರವಾಲ್ಗೆ ಶೇ. 15ರಷ್ಟು ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಹಿಳೆಯೊಬ್ಬರಿಗೆ ಹಣಕಾಸು ವಿಚಾರದಲ್ಲಿ ಮೋಸ ಮಾಡಿದ ಆರೋಪ ಅಗರವಾಲ್ ಮೇಲಿದ್ದು, ಕಳೆದ ನಾಲ್ಕು ವರ್ಷಗಳಿಂದ ವಿಚಾರಣೆ ನಡೆಯುತ್ತಿದೆ. ಈ ವೇಳೆ ಅಗರವಾಲ್ನಿಂದ ಮೋಸ ಹೋದ ಮಹಿಳೆ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಅಗರವಾಲ್ ತನ್ನನ್ನು ಮುಗ್ಧ ಎಂದು ಸಾಬೀತುಪಡಿಸಲು ಈ ರೀತಿ ಆತ್ಮಹತ್ಯೆ ನಾಟಕವಾಡಿದ್ದಾನೆ ಎಂದು ಆರೋಪಿಸಿದ್ದಾರೆ.