ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಹೆಚ್ಚುತ್ತಿರುವ ದೇಶದ ಉನ್ನತ ಪ್ರೊಫೈಲ್ ಪ್ರತಿಭಟನಾಕಾರರ ಸಾಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಸೇರ್ಪಡೆಯಾಗಿದ್ದಾರೆ.
‘ಸ್ವಾತಂತ್ರ್ಯ ಇಲ್ಲದೆ ಶಾಂತಿ ಇಲ್ಲ , ಶಾಂತಿ ಇಲ್ಲದೆ ಸ್ವಾತಂತ್ರ್ಯವಿಲ್ಲ’, ಎಂಬ ವಿಷಯದ ಮೇಲೆ ನವದೆಹಲಿಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಕೆಲ ಕ್ಷುದ್ರ ಗುಂಪುಗಳು ಚಿಂತನಾ ಸ್ವಾತಂತ್ರ್ಯ, ನಂಬಿಕೆ, ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಮೂಲಕ, ಹಿಂಸೆಗಿಳಿಯುವ ಮೂಲಕ ದೇಶವನ್ನು ಆತಂಕಕ್ಕೆ ದೂಡಿದ್ದಾರೆ.
ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ 125 ನೇ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿರುವ ಸಮ್ಮೇಳನದ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತಿದ್ದ ಪ್ರಧಾನಿ, ‘ವಿಚಾರವಾದಿಗಳ ಹತ್ಯೆ ಅಥವಾ ವ್ಯಕ್ತಿ ತಿನ್ನುವ ಆಹಾರದ ಮೇಲೆ ಭಿನ್ನಾಭಿಪ್ರಾಯ ಸಮರ್ಥನೀಯವಲ್ಲ’, ಎಂದು ಅಭಿಪ್ರಾಯ ಪಟ್ಟಿದ್ದಾರೆ.