ನವದೆಹಲಿ: ಉನ್ನತ ಅಧಿಕಾರಿಗಳ ನೇಮಕ, ವರ್ಗಾವಣೆಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಉಪರಾಷ್ಟ್ರಪತಿ ನಜೀಬ್ ಜಂಗ್ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಈ ಸಂಬಂಧ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶೇಷ ವಿಧಾನಸಭಾ ಅಧಿವೇಶನವನ್ನು ಕರೆದಿದ್ದಾರೆ.
ಹಿರಿಯ ಅಧಿಕಾರಿಗಳ ನೇಮಕ, ವರ್ಗಾವಣೆ ಸಂಬಂಧ ತಿಕ್ಕಾಟದಿಂದ ರೋಸಿ ಹೋಗಿರುವ ಕೇಜ್ರಿವಾಲ್ ಮೇ 26 ಹಾಗೂ 27 ರಂದು ವಿಶೇಷ ಅಧಿವೇಶನವನ್ನು ಕರೆದಿದ್ದಾರೆ. ಈ ಹಿಂದೆ ಜೂನ್ ನಲ್ಲಿ ಅಧಿವೇಶನಕ್ಕೆ ನಿರ್ಧರಿಸಲಾಗಿತ್ತು.
ಉನ್ನತ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆ ಮಾಡುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಗೆ ಇದೆ ಎಂದು ಗೃಹ ಇಲಾಖೆ ವಿಶೇಷ ಪ್ರಕಟಣೆ ಹೊರಡಿಸಿತ್ತು. ಈ ಎಲ್ಲಾ ಚಟುವಟಿಕೆಯಿಂದಾಗಿ ಕೇಜ್ರಿವಾಲ್ ವಿಶೇಷ ಅಧಿವೇಶವನ್ನು ಕರೆದಿದ್ದಾರೆ.