ರಾಷ್ಟ್ರೀಯ

ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿ ಶಪಥ; ಶಿವಸೇನಾ ಟೀಕಿಸಲಾರೆ

Pinterest LinkedIn Tumblr

Modi Newyork visit_Sept 28_2014_013

ತಾಸಗಾಂವ್‌/ಮಹಾರಾಷ್ಟ್ರ (ಪಿಟಿಐ): ಬಿಜೆಪಿಯ ಸಖ್ಯ ತೊರೆದ ಶಿವಸೇನಾ ವಿರುದ್ಧ ಚುನಾವಣಾ ಪ್ರಚಾರ ಸಭೆ­ಗಳಲ್ಲಿ ಒಂದೇ ಒಂದು ಶಬ್ದವನ್ನೂ ಮಾತ­­ನಾಡದಿರಲು ಶಪಥ ಮಾಡಿರು­ವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶಿವಸೇನಾ ಸಂಸ್ಥಾಪಕ ದಿವಂಗತ ಬಾಳಾ ಠಾಕ್ರೆ ಮೇಲಿನ ಗೌರವ ಮತ್ತು ಅಭಿಮಾನದಿಂದ ಈ ಸ್ವಯಂ ನಿಯಂತ್ರಣ ಹೇರಿಕೊಂಡಿರುವುದಾಗಿ ಅವರು ಸಮಜಾಯಿಷಿ ನೀಡಿದ್ದಾರೆ. ಸಾಂಗ್ಲಿಯ ತಾಸಗಾಂವ್‌ನಲ್ಲಿ ಭಾನು­ವಾರ ನಡೆದ ಮಹಾರಾಷ್ಟ್ರ ವಿಧಾನ­ಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಮರಾಠಿಯಲ್ಲಿ ಮಾತು ಆರಂಭಿಸಿದ ಮೋದಿ, ತಮ್ಮ ಎಂದಿನ ಶೈಲಿಯಲ್ಲಿ ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹಾಗೂ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಮೋದಿ ಏಕೆ ತಮ್ಮ ಚುನಾವಣಾ ಭಾಷಣಗಳಲ್ಲಿ ಶಿವಸೇನಾವನ್ನು ಟೀಕಿಸು­ತ್ತಿಲ್ಲ ಎನ್ನುವುದು ರಾಜಕೀಯ ಪಂಡಿತ­ರಿಗೆ ಆಶ್ಚರ್ಯವಾಗಿರಬಹುದು. ಶಿವ­ಸೇನಾ ವಿರುದ್ಧ ನಾನು ಮಾತನಾಡ­ದಿರುವುದು ಬಾಳಾ ಠಾಕ್ರೆ ಅವರಿಗೆ ಸಲ್ಲಿಸುತ್ತಿರುವ ಗೌರವ’ ಎಂದರು.

‘ಬಾಳಾ ಠಾಕ್ರೆ ಅವರ ಬಗ್ಗೆ ನನಗೆ ಅಪಾರ ಗೌರವ, ಅಭಿಮಾನವಿದೆ. ಅವರಿ­­ಲ್ಲದ ಮೊದಲ ಚುನಾವಣೆ ಇದು. ಕೆಲವು ಸಂಗತಿಗಳು ರಾಜಕೀಯವನ್ನೂ ಮೀರಿರುತ್ತವೆ. ಹೀಗಾಗಿ ಎಲ್ಲವನ್ನೂ ರಾಜಕೀಯಕ್ಕೆ ತಳುಕು ಹಾಕುವುದು ಸರಿಯಲ್ಲ’ ಎಂದು ವಿವರಿಸಿದರು.
‘60 ವರ್ಷಗಳಿಂದ ಈ ದೇಶವನ್ನು ಆಳಿದ ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ತಾನು ಮಾಡಿದ್ದಾದರೂ ಏನು ಎಂಬ ಬಗ್ಗೆ ಇದುವರೆಗೂ ಲೆಕ್ಕ ಕೊಟ್ಟಿಲ್ಲ. ಅಧಿಕಾರಕ್ಕೆ ಬಂದು 60 ದಿನಗಳಾಗಿರುವ ನಮ್ಮಿಂದ ಕಾಂಗ್ರೆಸ್‌ ಉತ್ತರ ಬಯ­ಸುತ್ತಿದೆ’ ಎಂದರು.

ಭ್ರಷ್ಟಾಚಾರ­ದಲ್ಲಿ ಕಾಂಗ್ರೆಸ್‌ ಮತ್ತು ಎನ್‌ಸಿಪಿ ಅವಳಿಗಳಿದ್ದಂತೆ. ದೇಶಕ್ಕಾಗಿ ಹುತಾತ್ಮ­ರಾದ ಕಾರ್ಗಿಲ್‌ ಯೋಧರ ವಿಧವಾ ಪತ್ನಿಯರಿಗೆ ನೀಡಿದ ಮನೆ­ಗಳನ್ನು ಎರಡೂ ಪಕ್ಷಗಳು ಕಿತ್ತು­ಕೊಂಡಿವೆ ಎಂದು ಆರೋಪಿಸಿದರು.

Write A Comment