ಗಲ್ಫ್

ದುಬೈ – ಜಾರ್ಜಿಯ ದಲ್ಲಿ ಪಾರ್ಚೂನ್ ಗ್ರೂಪ್ ಆಫ್ ಹೊಟೇಲ್ಸ್ ವತಿಯಿಂದ ರಕ್ತದಾನ ಶಿಬಿರ

Pinterest LinkedIn Tumblr

Photo: Ashok Belman

ಕೊಲ್ಲಿ ರಾಷ್ಠ್ರದ ಪ್ರತಿಷ್ಠಿತ ಪಾರ್ಚೂನ್ ಗ್ರೂಪ್ ಆಫ್ ಹೊಟೆಲ್ಸ್ ವತಿಯಿಂದ ಸಂಸ್ಥೆಯ ಮಾಲಕರಾದ ಶ್ರೀ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರ ಮಾತಾ-ಪಿತರಾದ ಶ್ರೀಮತಿ ಸರೋಜಿನಿ ಶೆಟ್ಟಿ-ಶ್ರೀ ನಾರಾಯಣ ಶೆಟ್ಟಿಯವರ 54ನೇ ವಿವಾಹ ವಾರ್ಷಿಕೋತ್ಸವದ ಸಲುವಾಗಿ ರಕ್ತದಾನ ಶಿಬಿರವು ತಾ 22.05.2019ನೇ ಬುಧವಾರದಂದು ‘ದುಬೈಯ ಪಾರ್ಚೂನ್ ಪ್ಲಾಝಾ ಹೊಟೇಲಿನಲ್ಲಿ’ ಮತ್ತು ‘ಜಾರ್ಜಿಯ ದೇಶದ ಟಿಬ್ಲಿಸಿಯಲ್ಲಿರುವ ಫಾರ್ಚೂನ್ ಪೇಲೇಸ್ ಹೊಟೇಲಿನಲ್ಲಿ’ ಏಕ ಕಾಲದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ವರ್ಗ ಮತ್ತು ಸಿಬ್ಭಂದಿಗಳು ಸೇರಿದಂತ ಸುಮಾರು ನೂರಕ್ಕೂ ಅಧಿಕ ಮಂದಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ರಕ್ತದಾನ ಮಾಡಿಮಾಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ , ಗ್ರೂಪ್ ಜನರಲ್ ಮೆನೆಜರ್ ಶ್ರೀ ಅಲೋಕ್ ನರುಲ, ಜನರಲ್ ಮೆನೆಜರ್ ಗಳಾದ ಶ್ರೀ ಧನ್ವಂತ್ ಸಿಂಗ್, ಶ್ರೀ ಯಶವಂತ್ ನೇಗಿ, ಶ್ರೀ ಹರೀಶ್ ಶೆಟ್ಟಿ ಮುಂತಾದವರು ಪಾಲ್ಗೊಂಡಿದ್ದರು.

Comments are closed.