ಗಲ್ಫ್

ದುಬೈಯಲ್ಲಿ ಪದ್ಮಶಾಲಿ ಸಮುದಾಯದವರಿಂದ ಸತ್ಯನಾರಾಯಣ ಪೂಜೆ

Pinterest LinkedIn Tumblr

ಯುಎಎಯ್ಯ ಅನಿವಾಸಿ ಪದ್ಮಶಾಲಿ ಸಂಘಟನೆ “ಯುಎಇ ಪದ್ಮಶಾಲಿ ಸಮುದಾಯ’ದ ಆಶ್ರಯದಲ್ಲಿ ಸತ್ಯನಾರಾಯಣ ಪೂಜಾ ಕೈಕರ್ಯವನ್ನು ಬಹಳ ಅದ್ದೂರಿಯಾಗಿ ನೆರವೇರಿಸಲಾಯಿತು.

ಅಕ್ಟೊಬರ್ 13ರಂದು ದುಬೈಯ ಸಿಂಧಿ ಸೆರೆಮೋನಿಯಲ್ ಸೆಂಟರಿನಲ್ಲಿ ಜರಗಿದ ಈ ಕಾರ್ಯಕ್ರಮವು ಬೆಳಗ್ಗೆ 10 ಗಂಟೆಯಿಂದ ಆರಂಭಗೊಂಡು ಪೂಜಾ ವಿಧಿವಿಧಾನಗಳೊಂದಿಗೆ ಮಧ್ಯಾಹ್ನ 3ಗಂಟೆಗೆ ಸಮಾಪನಗೊಂಡಿತು.

ಪದ್ಮಶಾಲಿಗರ ಪರವಾಗಿ ಅರವಿಂದ ಪ್ರಕಾಶ್ ದಂಪತಿಗಳು ಪೂಜೆಗೆ ಕುಳಿತು, ಸಂಕಲ್ಪ, ಕಲಶ ಪ್ರತಿಷ್ಠಾಪನೆ, ಭಜನೆ, ಮಹಾಪೂಜೆ ಮತ್ತು ಅಣ್ಣ ಸಂತರ್ಪಣೆಯೊಂದಿಗೆ ಸಾಂಗವಾಗಿ ನೆರವೇರಿಸಲಾಯಿತು. ಹರಿಪ್ರಸಾದ್ ತಂತ್ರಿ ಪೂಜೆಯನ್ನು ನೆರವೇರಿಸಿಕೊಟ್ಟರು.

Comments are closed.