ಗಲ್ಫ್

ಮುತ್ತುಗಳ ದ್ವೀಪದಲ್ಲಿ ಕರಾವಳಿಯ ಕಲರವ : “ಬಂಟ್ಸ್ ಬಹರೈನ್ ” ನಿಂದ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮ “ಕರಾವಳಿ ಉತ್ಸವ-2016”

Pinterest LinkedIn Tumblr

21

ವಿಶೇಷ ತಾರಾಕರ್ಷಣೆ “ರಂಗಿತರಂಗ ” ಖ್ಯಾತಿಯ ರಾಧಿಕಾ ಚೇತನ್ : ಭಲೇ ತೆಲಿಪಾಲೆ ಖ್ಯಾತಿಯ “ಪ್ರಶಂಸಾ ” ತಂಡದಿಂದ ನಗೆ ಹಬ್ಬ

ಬಹರೈನ್ ; ಇಲ್ಲಿನ ಅನಿವಾಸಿ ಬಂಟರ ಸಂಘಟನೆಯಾದ ” ಬಂಟ್ಸ್ ಬಹರೈನ್ ” “ಕನ್ನಡ ಸಂಘ ಬಹರೈನ್ ” ನ ಆಶ್ರಯದಲ್ಲಿ “ಕರಾವಳಿ ಉತ್ಸವ -೨೦೧೬ ” ಎನ್ನುವ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಇದೆ ಬರುವ ಅಕ್ಟೋಬರ್ ತಿಂಗಳ ೧೪ರಂದು ಮನಾಮದಲ್ಲಿರುವ ಅಲ್ ರಾಜಾ ಸ್ಕೂಲಿನ ಸಭಾಂಗಣದಲ್ಲಿ ಆಯೋಜಿಸಿಲಾಗಿದೆ .

img-20160927-wa0099

img-20160927-wa0109

img-20160927-wa0107

img-20160927-wa0106 img-20160927-wa0104

img-20160927-wa0102

 img-20160927-wa0100

ಕಳೆದ ಹನ್ನೆರಡು ವರುಷಗಳಿಂದ ದ್ವೀಪದಲ್ಲಿ ಅಸ್ತಿತ್ವದಲ್ಲಿದ್ದು ಸಮುದಾಯದ ನೋವು ನಲಿವುಗಳಿಗೆ ಸ್ಪಂದಿಸುವುದರ ಜೊತೆಗೆ ಸಾಂಸ್ಕ್ರತಿಕ ರಂಗದಲ್ಲೂ ಮುಂಚೂಣಿಯಲ್ಲಿರುವ ಬಂಟ್ಸ್ ಬಹರೈನ್ ಪ್ರಪ್ರಥಮ ಬಾರಿಗೆ ದ್ವೀಪದ ತುಳುವ ,ಕನ್ನಡ ಸಮುದಾಯವನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸ್ಕೊಂಡು “ಕರಾವಳಿ ಉತ್ಸವ -೨೦೧೬ ” ಎನ್ನುವ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ .

“ಭಲೇ ತೆಲಿಪಾಲೆ ” ಹಾಸ್ಯ ಪ್ರಹಸನ ಸ್ಪರ್ಧೆಯ ಮೂರು ಆವೃತ್ತಿಗಳಲ್ಲೂ ಶ್ರೇಷ್ಠ ಪ್ರದರ್ಶನ ನೀಡಿ ಪ್ರಥಮ ಬಹುಮಾನವನ್ನು ಗಳಿಸುವುದರ ಜೊತೆಗೆ ತುಳುರಂಗಭೂಮಿಯಲ್ಲಿ ಹಾಸ್ಯದ ಹೊಸ ಅಧ್ಯಾಯವನ್ನು ಬರೆದು , ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮನೆ ಮಾತಾಗಿರುವ ” ಪ್ರಶಂಸಾ ” ತಂಡವು ಕರಾವಳಿ ಉತ್ಸವದ ಪ್ರಮುಖ ಆಕರ್ಷಣೆಯಾಗಿ ತಮ್ಮ ಹಾಸ್ಯ ಪ್ರದರ್ಶನದಿಂದ ದ್ವೀಪದ ಜನರಿಗೆ ನಗೆಯ ಕಚಗುಳಿ ನೀಡಲಿದ್ದಾರೆ . “ರಂಗಿ ತರಂಗ ” ಹಾಗು “ಯೂ ಟರ್ನ್ ” ಚಿತ್ರಗಳ ಖ್ಯಾತಿಯ ನಾಯಕ ನಟಿ ಚೇತನಾ ರಾಧಿಕ್ ರವರು ಈ ಕಾರ್ಯಕ್ರಮಕ್ಕಾಗಿಯೇ ದ್ವೀಪಕ್ಕೆ ವಿಶೇಷವಾಗಿ ಆಗಮಿಸಲಿದ್ದು ಕರಾವಳಿ ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡಲಿದ್ದಾರೆ .

ಈ ಉತ್ಸವವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ನಾಡಿನಿಂದ ಅನೇಕ ಬಂಟ ಸಾಧಕರುಗಳು ದ್ವೀಪಕ್ಕೆ ಆಗಮಿಸುತ್ತಿದ್ದು ಖ್ಯಾತ ಸಮಾಜಸೇವಕರೂ ,ಕೊಲ್ಲೂರು ಮೂಕಾಂಬಿಕಾ ದೇಗುಲದ ಧರ್ಮದರ್ಶಿಗಳೂ ಆಗಿರುವ ಕೃಷ್ಣ ಪ್ರಸಾದ್ ಅಡ್ಯಂತಯ್ಯ ,ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿ ಅನೇಕ ರಾಷ್ಟ್ರೀಯ ಪುರಸ್ಕಾರಗಳಿಗೆ ಭಾಜನರಾಗಿರುವ ಖ್ಯಾತ ವಾಸ್ತು ಶಿಲ್ಪಿ ಜೀವನ್ ಶೆಟ್ಟಿ ,ಅಂತರಾಷ್ಟ್ರೀಯ ರೂಪದರ್ಶಿ ಮನೋಜ್ ಶೆಟ್ಟಿ ,ಅಬುಧಾಬಿಯ ಖ್ಯಾತ ಸಮಾಜ ಸೇವಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸರ್ವೋತ್ತಮ ಶೆಟ್ಟಿ ಮುಂತಾದವರು ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ .

ಕರಾವಳಿ ಉತ್ಸವದಲ್ಲಿ ಕರಾವಳಿಯ ಸಾಂಪ್ರದಾಯಿಕ ಕಲೆ ,ಸಂಸ್ಕ್ರತಿಗಳಿಗೆ ವಿಶೇಷ ಮಾನ್ಯತೆ ನೀಡಲಾಗಿದ್ದು ಕರಾವಳಿಯ ವೈವಿಧ್ಯಮಯ ಕಲಾ ಪ್ರಕಾರಗಳು ಈ ಉತ್ಸವದಲ್ಲಿ ಅನಾವರಣಗೊಳ್ಳಲಿದೆ . ಕರಾವಳಿಯ ಸಾಂಪ್ರದಾಯಿಕ ಆಹಾರ ಪದಾರ್ಥಗಳ ಬ್ರಹತ್ ಪ್ರದರ್ಶನ ಈ ಉತ್ಸವದಲ್ಲಿ ಆಯೋಜಿಸಲಾಗುತ್ತಿದೆ . ಕೊಲ್ಲಿ ರಾಷ್ಟ್ರಗಳ ಕಲಾ ಪ್ರತಿಭೆಗಳಿಗೆ ಈ ಉತ್ಸವದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದ್ದು ದುಬೈ ಸೇರಿದಂತೆ ತಲಾ ೧೫ ಕಲಾವಿದರುಗಳನ್ನೊಳಗೊಂಡ ಒಟ್ಟು ಏಳು ತಂಡಗಳು ೨೦ ನಿಮಿಷಗಳ ವೈವಿಧ್ಯಮಯ ಕಲಾಪ್ರದರ್ಶನವನ್ನು ನೀಡಲಿದ್ದಾರೆ . ಇದರಲ್ಲಿ ವಿಜೇತ ತಂಡಗಳಿಗೆ ನಗದು ಬಹುಮಾನದ ಜೊತೆಗೆ ಟ್ರೋಫಿಯನ್ನು ನೀಡಲಾಗುವುದು . ತುಳುನಾಡಿನ ಖ್ಯಾತ ನಟ ,ನಿರೂಪಕ ಆರ್ .ಜೆ ರೂಪೇಶ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ .

ಬಂಟ್ಸ್ ಬಹರೈನ್ ನ ಅಧ್ಯಕ್ಷರಾದ ಶ್ರೀ ರಾಜೇಶ್ ಶೆಟ್ಟಿ ಯವರ ಸಾರಥ್ಯದಲ್ಲಿ ಬಂಟ್ಸ್ ಬಹರೈನ್ ಆಡಳಿತ ಮಂಡಳಿಯು ಇದಾಗಲೇ ಅನೇಕ ರೂಪುರೇಷೆಗಳನ್ನು ಹಾಕಿಕೊಂಡಿದ್ದು ಈ ಉತ್ಸವವು ದ್ವೀಪದಲ್ಲಿ ಒಂದು ಮೈಲಿಗಲ್ಲಾಗುವುದರಲ್ಲಿ ಯಾವುದೇ ಸಂಶಯವಿಲ್ಲ . ಅಕ್ಟೋಬರ್ ೧೪ರ ಅಪರಾಹ್ನ ಒಂದು ಘಂಟೆಗೆ ಮೆರವಣಿಗೆಯೊಂದಿಗೆ ಈ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರಕಲಿದ್ದು ರಾತ್ರಿ ೧೦ ಘಂಟೆಗೆ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿರುವುದು .

ಈ ಉತ್ಸವಕ್ಕೆ ದ್ವೀಪದ ಎಲ್ಲಾ ಕನ್ನಡ ,ತುಳು ಸಮುದಾಯದವರಿಗೆ ಪ್ರವೇಶ ಉಚಿತವಾಗಿದ್ದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬಂಟ್ಸ್ ಬಹರೈನ್ ಆಡಳಿತ ಮಂಡಳಿಯವರು ನೀಡಿದ್ದಾರೆ . ಕಾರ್ಯಕ್ರಮದ ಬಗೆಗಿನ ಹೆಚ್ಚಿನ ವಿವರಗಳಿಗೆ ಬಂಟ್ಸ್ ಬಹರೈನ್ ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರೋಷನ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 39788945 ಹಾಗು ಮನೋರಂಜನಾ ಕಾರ್ಯದರ್ಶಿ ಶ್ರೀ ಸಂಜೀವ್ ಶೆಟ್ಟಿ ಯವರನ್ನು ದೂರವಾಣಿ ಸಂಖ್ಯೆ 33978751 ಮುಖೇನ ಸಂಪರ್ಕಿಸಬಹುದು .

ವರದಿ- ಕಮಲಾಕ್ಷ ಅಮೀನ್

Comments are closed.