ಗಲ್ಫ್

ಶ್ರೀ ಸತೀಶ್ ವೆಂಕಟರಮಣ ಶಾರ್ಜಾ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ

Pinterest LinkedIn Tumblr

Sharjah karnataka sangha_Feb 22_2015-014

ಯು.ಎ.ಇ. ಯ ಶಾರ್ಜಾ ಕರ್ನಾಟಕ ಸಂಘದ 2015 ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀ ಸತೀಶ್ ವೆಂಕಟರಮಣ ರವರು ಸರ್ವಾನುಮತದಿಂದ ಆಯ್ಕೆಯಾದರು.

Sharjah karnataka sangha_Feb 22_2015-012

ಶಾರ್ಜಾ ಕರ್ನಾಟಕ ಸಂಘದ ವಾರ್ಷಿಕ ಮಹಾಸಭೆ ದಿನಾಂಕ 2015 ಫೆಬ್ರವರಿ 21 ಶನಿವಾರ ಸಂಜೆ 8.00 ಗಂಟೆಗೆ ಫಾರ್ಚೂನ್ ಫ್ಲಾಜಾ ಹೋಟೆಲ್ ಫ್ಲಾಜಾ ಬಾಂಕ್ವೆಟ್ ಸಭಾಂಗಣದಲ್ಲಿ ನಡೆಯಿತು. ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶಾಂತರಾಂ ಆಚಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆ ಶ್ರೀಮತಿ ರೋಹಿಣಿ ಅನಂತ್ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಅಧ್ಯಕ್ಷರು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರನ್ನು ಸ್ವಾಗತಿಸಿ ತಮ್ಮ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಬಗ್ಗೆ ಅವಲೋಕನ ಮಾಡಿ ಯಶಸ್ಸಿಗೆ ಶ್ರಮಿಸಿದ ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿದರು. ವಾರ್ಷಿಕ ವರದಿಯನ್ನು ಪ್ರಧಾನ ಕಾರ್ಯದರ್ಶಿ ಶ್ರೀ ಶಶಿಕಾಂತ್ ಕನ್ನಂಗಿ ಸಭೆಯ ಮುಂದಿಟ್ಟರು. ಖಜಾಂಚಿ ಶ್ರೀ ಆನಂದ್ ಬೈಲೂರ್ ರವರು ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿದರು. ವಂದಾನರ್ಪಣೆಯೊಂದಿಗೆ ಸಭೆಯನ್ನು ಮುಗಿಸಿ ಮುಂದಿನ ನೂತನ ಸಮಿತಿಯ ಆಯ್ಕೆ ಪ್ರಕ್ರೀಯೆಗೆ ಚಾಲನೆ ನೀಡಲಾಯಿತು.

Sharjah karnataka sangha_Feb 22_2015-002

Sharjah karnataka sangha_Feb 22_2015-003

Sharjah karnataka sangha_Feb 22_2015-004

Sharjah karnataka sangha_Feb 22_2015-005

Sharjah karnataka sangha_Feb 22_2015-006

Sharjah karnataka sangha_Feb 22_2015-007

Sharjah karnataka sangha_Feb 22_2015-008

Sharjah karnataka sangha_Feb 22_2015-009

Sharjah karnataka sangha_Feb 22_2015-010

Sharjah karnataka sangha_Feb 22_2015-011

Sharjah karnataka sangha_Feb 22_2015-013

2015ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ಸಂಘ ಶಾರ್ಜಾದ ಪೋಷಕರಾದ ಶ್ರೀ ಮಾರ್ಕ್ ಡೆನಿಸ್ ರವರು ಸಂಘಟನೆಯ ಧ್ಯೇಯೊದ್ಧೇಶವನ್ನು ವಿವರಿಸಿ ನೂತನ ಸಮಿತಿಯ ರಚನೆಯ ಪ್ರಕ್ರಿಯೇಯನ್ನು ಪ್ರಮಾಣ ವಚನ ಸ್ವೀಕಾರದೊಂದಿಗೆ ನೆರವೇರಿಸಿಕೊಟ್ಟರು.

ನೂತನ ಕಾರ್ಯಕಾರಿ ಸಮಿತಿ :
ಅಧ್ಯಕ್ಷರು : ಶ್ರೀ ಸತೀಶ್ ವೆಂಕಟರಮಣ
ಉಪಾಧ್ಯಕ್ಷರು : ಶ್ರೀ ಎಂ. ಇ. ಮೂಳುರ್ / ಶ್ರೀ ಸುಗಂಧರಾಜ್ ಬೇಕಲ್
ಪ್ರಧಾನ ಕಾರ್ಯದರ್ಶಿ : ಶ್ರೀ ಅನಂತ್. ಎನ್.
ಸಹ ಕಾರ್ಯದರ್ಶಿ : ಶ್ರೀ ಅಬ್ದುಲ್ ರಝಾಕ್
ಖಜಾಂಚಿ: ಶ್ರೀ ಶಶಿಕಾಂತ್ ಕಾನಂಗಿ
ಸಹ ಖಜಾಂಚಿ : ಶ್ರೀ ಅನಂದ್ ಬೈಲೂರ್
ಸಾಂಸ್ಕೃತಿಕ ಕಾರ್ಯದರ್ಶಿ : ಶ್ರೀ ವಿಶ್ವನಾಥ್ ಶೆಟ್ಟಿ
ಸಹ ಸಾಂಸ್ಕೃತಿಕ ಕಾರ್ಯದರ್ಶಿ : ರಾಜೇಶ್ ಕುತ್ತಾರ್
ಕ್ರೀಡಾ ಕಾರ್ಯದರ್ಶಿ : ಶ್ರೀ ಸಂದೀಪ್ ರಾವ್
ಸಹ ಕ್ರೀಡಾ ಕಾರ್ಯದರ್ಶಿ : ಶ್ರೀ ಜೀವನ್ ಕುಕ್ಯಾನ್

ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ನೂತನ ಮಹಿಳಾ ಸದಸ್ಯರು :
ಶ್ರೀಮತಿ ಮಂಜುಳಾ ಗಣೇಶ್ ರೈ
ಶ್ರೀಮತಿ ಸುವರ್ಣ ಸತೀಶ್ ಪೂಜಾರಿ
ಶ್ರೀಮತಿ ರಜನಿ ಜೀವನ್ ಕುಕ್ಯಾನ್
ಶ್ರೀಮತಿ ಉಷಾ ವಿಶ್ವನಾಥ್ ಶೆಟ್ಟಿ
ಶ್ರೀಮತಿ ರೋಹಿಣಿ ಅನಂತ್
ಶ್ರೀಮತಿ ವಹಿದಾ ರಝಾಕ್

ನೂತನ ಕಾರ್ಯಕಾರಿ ಸಮಿತಿಗೆ ಶುಭವನ್ನು ಹಾರೈಸಿ, ಮಾರ್ಗದರ್ಶನ, ಸಲಹೆ ಸೂಚನೆಗಳನ್ನು ಸಲಹೆಗಾರರಾದ ಶ್ರೀ ಪ್ರವೀಣ್ ಶೆಟ್ಟಿ, ಶ್ರೀ ಗಣೇಶ್ ರೈ, ಶ್ರೀ ಹರೀಶ್ ಶೇರಿಗಾರ್ ಮತ್ತು ಶ್ರೀ ಪ್ರಭಾಕರ ಅಂಬಲತೆರೆಯವರು ನೀಡಿದರು.

ನೂತನ ಅಧ್ಯಕ್ಷರಾಗಿ ಅಧಿಕಾರವನ್ನು ಸ್ವೀಕರಿಸಿದ ಶ್ರೀ ಸತೀಶ್ ವೆಂಕಟರಮಣರವರು ಸರ್ವರಿಗೂ ಕೃತಜ್ಞತೆಯನ್ನು ಸಲ್ಲಿಸಿ ಮುಂದಿನ ಯಶಸ್ವಿಪಯಣದತ್ತ ಮುನ್ನಡೆಯಲು ಸರ್ವರ ಸಹಕಾರವನ್ನು ಕೋರಿ ವಂದನೆಯನ್ನು ಸಲ್ಲಿಸಿದರು. ಶ್ರೀ ರಾಜೇಶ್ ಕುತ್ತಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕೊನೆಯಲ್ಲಿ ಭೋಜನದೊಂದಿಗೆ ಸಭೆ ಮುಕ್ತಾಯವಾಯಿತು.

Write A Comment