
ಮಂಗಳೂರು : 2015ನೆ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ 387ನೆ ರ್ಯಾಂಕ್ ಗಳಿಸಿರುವ ನಿಡ್ಡೋಡಿ-ನೀರುಡೆಯ ಮಿಶಾಲ್ ಕ್ವೀನಿ ಡಿಕೋಸ್ತ ಹಾಗೂ ಸರ್ಫಿಂಗ್ನಲ್ಲಿ ಸಾಧನೆಗೈದ ಪುತ್ತೂರಿನ ಅನೀಶಾ ನಾಯಕ್ ಅವರನ್ನು ಶುಕ್ರವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮಂಗಳೂರು ನಗರ ಪೊಲೀಸ್ ಅಯುಕ್ತ ಚಂದ್ರಶೇಖರ್ ಎಂ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಶ್ರೀವಿದ್ಯಾ ಮೊದಲಾದವರು ಈ ಇಬ್ಬರು ಸಾಧಕರಿಗೆ ಹೂಗುಚ್ಚ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಮಿಶಾಲ್ ಕ್ವೀನಿ ಡಿಕೋಸ್ತ ಹಾಗೂ ಪುತ್ತೂರಿನ ಅನೀಶಾ ನಾಯಕ್ ಅವರ ಫೋಷಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.