ಮಂಗಳೂರು,ಮೇ.07: :ಓಂ ಎಂಟರ್ಟೈನ್ಮೆಂಟ್ ಬ್ಯಾನರ್ನಡಿ ಉದಯಾನಂದ ಬರ್ಕೆ ನಿರ್ಮಿಸುತ್ತಿರುವ ತಾಳೆಗರಿ ಕನ್ನಡ ತುಳು ಚಲನಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ಕಲ್ಲಡದಲ್ಲಿ ಜರಗಿತು.
ಕಲ್ಲಡ್ಕ ಶ್ರೀರಾಮ `ಭಜನಾ ಮಂದಿರದಲ್ಲಿ ಡಾ|ಕಲ್ಲಡ್ಕ ಪ್ರಭಾಕರ್ ಭಟ್ ಅವರು ಬಿಡುಗಡೆಗೊಳಿಸಿ ಭಾರತೀಯ ಪಾರಂಪರಿಕ ರಹಸ್ಯಗಳು ಹಿಂದೆ ತಾಳೆಗರಿಯಲ್ಲಿ ಪುರಾತನ ಲಿಪಿ ಮೂಲಕ `ಮುದ್ರಿತವಾಗಿರುತ್ತಿದ್ದವು .ಇದೀಗ ಇದೇ ಹೆಸರಿನಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಿದ್ದು ಭಾರತೀಯ ಪರಂಪರೆಯನ್ನು ಎತ್ತಿಹಿಡಿಯಬೇಕು ಎಂದರು.
ಮಾಜಿ ಶಾಸಕ ರುಕ್ಮಯ್ಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಚಿತ್ರದ ಪ್ರಮುಖ ತಾರಾಗಣದಲ್ಲಿರುವ ಗಣೇಶ್ ಕಲ್ಲಡ್ಕ, ನಾರಾಯಣ್, ವಸಂತ್ ಬಂಗೇರ, ಗಂಗಾವತಿ ಪೂಜಾರಿ,ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.