ಕನ್ನಡ ವಾರ್ತೆಗಳು

ವರುಣನ ಕೃಪೆಗಾಗಿ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಶಾಸಕ ಜೆ.ಆರ್ ಲೋಬೊರಿಂದ ಪ್ರಾರ್ಥನೆ.

Pinterest LinkedIn Tumblr

Rain_preyer_photo_1

ಮಂಗಳೂರು,ಮೇ.05:  ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್ .ಲೋಬೋ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ಮಂಗಳುರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ವಿವಿಧ ಧಾರ್ಮಿಕ ಕೇಂದ್ರಗಳಾದ ಶ್ರೀ ಮಂಗಳಾದೇವಿ ದೇವಸ್ಥಾನ, ಬಿಷಪ್ ಹೌಸ್, ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಮಳೆಗಾಗಿ ಪ್ರಾಥನೆ ಸಲ್ಲಿಸಲಾಯಿತು.

Rain_preyer_photo_2 Rain_preyer_photo_3 Rain_preyer_photo_4 Rain_preyer_photo_5 Rain_preyer_photo_6 Rain_preyer_photo_7 Rain_preyer_photo_9 Rain_preyer_photo_10 Rain_preyer_photo_11 Rain_preyer_photo_12 Rain_preyer_photo_13 Rain_preyer_photo_14 Rain_preyer_photo_15 Rain_preyer_photo_16 Rain_preyer_photo_17 Rain_preyer_photo_18 Rain_preyer_photo_19 Rain_preyer_photo_20 Rain_preyer_photo_21 Rain_preyer_photo_22 Rain_preyer_photo_23 Rain_preyer_photo_24 Rain_preyer_photo_25 Rain_preyer_photo_26 Rain_preyer_photo_27 Rain_preyer_photo_28 Rain_preyer_photo_30 Rain_preyer_photo_8

ಶಾಸಕರು ಬೆಳಗ್ಗೆ ಶ್ರೀ ಮಂಗಳಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನದ ಮುಖ್ಯ ಅರ್ಚಕ ಪದ್ಮನಾಭ ಐತಾಳರೊಂದಿಗೆ ಮಳೆಗಾಗಿ ಪ್ರಾರ್ಥನೆ ನಡೆಸಿದರು. ಆಡಳಿತ ಮೊಕ್ತೇಸ್ತರಾದ ರಮಾನಾಥ್ ಹೆಗ್ಡೆ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ತದ ನಂತರ ರೋಝಾರಿಯೋ ಚರ್ಚ್ ನ ಧರ್ಮಗುರುವಾದ ಜೆ.ಬಿ ಕ್ರಾಸ್ತರವರ ಉಪಸ್ಥಿತಿಯಲ್ಲಿ ಮಂಗಳೂರು ಬಿಷಪ್ ಹೌಸ್ ಗೆ ತೆರಳಿ ಬಿಷಪ್ ಆಲೋಶಿಯಸ್ ಪೌಲ್ ಡಿಸೋಜ ರೋಂದಿಗೆ ಚರ್ಚ್ ನಲ್ಲಿ ಮಳೆಗಾಗಿ ಪ್ರಾಥಿಸಿದರು.ಬಳಿಕ ಸುಮಾರು 10 ಗಂಟೆಗೆ ಕುದ್ರೋಳಿ ಜಮೀಯಾ ಮಸೀದಿ(ಜೋಡುಪಳ್ಳಿ) ಗೆ ಭೇಟಿ ಕೊಟ್ಟು ಮಸೀದಿಯ ಇಮಾಮಾರಾದ ಮೌಲಾನ ಝುಬೈರ್ ಅಹ್ಮದ್ ನದ್ವಿ, ಮೌಲಾನ ಆಮೀರ್‍ ಅಹ್ಮದ್ ಅವರೊಂದಿಗೆ ಮಳೆಗಾಗಿ ಪ್ರಾರ್ಥನೆ ನೆರವೇರಿಸಿದರು.

ಕಾಂಗ್ರೆಸ್ ಮುಖಂಡರಾದ ಮುಹಮ್ಮದ್ ಮಸೂದ್, ವಿಶ್ವಾಸ್ ದಾಸ್, ಬಾಲಕೃಷ್ಣ ಶೆಟ್ಟಿ, ಲನ್ನಿ ಲೊಟ್ ಪಿಂಟೊ, ಲತೀಫ್ ಕಂದಕ್, ಪ್ರವೀನ್ ಆಳ್ವ, ಪ್ರಕಾಶ್ ಸಾಲ್ಯಾನ್, ಟಿ.ಕೆ ಸುಧೀರ್, ಕವಿತಾ, ರತಿಕಲಾ, ಶೈಲಜಾ, ಕೇಶವ್ ಮರೋಳಿ ಮತ್ತು ಜಿಲ್ಲಾ ಪುಟ್ಬಾಲ್ ಅಸೋಸಿಯೇಶನ್‌ನ ಡಿ.ಎಂ ಅಸ್ಲಾಮ್ ಮೊದಲಾದವರು ಉಪಸ್ಥಿತರಿದ್ದರು.

Write A Comment