ಮಂಗಳೂರು,ಎ.15: ಕಟೀಲು ಶ್ರೀ ದೇವಿಯ ಪರಮ ಭಕ್ತರಾಗಿರುವ ಮುಂಬೈ ಹೋಟೆಲ್ ಅರ್ಚನಾ ರೆಸಿಡೆನ್ಸಿ ಇದರ ಮಾಲಕರಾದ ಕರುಣಾಕರ ಶೆಟ್ಟಿಯವರು ತನ್ನ ಸಹೋದರ ಪಾಪ್ಯುಲರ್ ಜಗದೀಶ ಸಿ.ಶೆಟ್ಟಿ ಮತ್ತು ಕುಟುಂಬಿಕರೊಂದಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಿಗೆ ರತ್ನ ಖಚಿತ ಚಿನ್ನದ ಕಿರೀಟವನ್ನು ಎಪ್ರಿಲ್ 12 ರಂದು ಸಮರ್ಪಿಸಿದರು.
ದೇವಳದ ಪ್ರಧಾನ ಆರ್ಚಕ ಶ್ರೀ ವಾಸುದೇವ ಅಸ್ರಣ್ಣ , ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಶ್ರೀ ಅನಂತ ಪದ್ಮನಾಭ ಅಸ್ರಣ್ಣ ಮತ್ತು ಸಹೋದರರು ಶ್ರೀ ದೇವಿಯ ಪ್ರಸಾದವಿತ್ತು ಹರಸಿದರು.