ಕನ್ನಡ ವಾರ್ತೆಗಳು

ಪಾದಚಾರಿಗೆ ಬೈಕ್ ಡಿಕ್ಕಿ : ಇಬ್ಬರಿಗೆ ಗಂಭೀರ ಗಾಯ : ಓರ್ವನ ಸ್ಥಿತಿ ಚಿಂತಾಜನಕ 

Pinterest LinkedIn Tumblr
thokottu_bike_acdnt_1
ಮಂಗಳೂರು,ಉಳ್ಳಾಲ ಮಾ.18 : ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು ಸಮೀಪದ ಕುತ್ತಾರು ಭಜನಾ ಮಂದಿರದ ಬಳಿ ರಸ್ತೆ ದಾಟ್ಟುತ್ತಿದ್ದ ಪಾದಚಾರಿಯೋರ್ವರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ.
thokottu_bike_acdnt_2 thokottu_bike_acdnt_3 thokottu_bike_acdnt_4
ಸಂತೋಷ್ ನಗರ ನಿವಾಸಿ ಶಶಿಧರ್ (45) ಎಂಬವರು  ನಿನ್ನೆ ರಾತ್ರಿ ಸಮಾರು 8.30ರ ವೇಳೆಗೆ ಕುತ್ತಾರು ಭಜನಾ ಮಂದಿರದ ಬಳಿ ರಸ್ತೆ ದಾಟುತ್ತಿದ್ದಾಗ ತೋಕ್ಕೂಟ್ಟು ಕಡೆಯಿಂದ ಅತೀ ವೇಗವಾಗಿ ಬಂದ (KA 19 EK 3468) ಬೈಕ್ ಇವರಿಗೆ ಡಿಕ್ಕಿ ಹೂಡೆದಿದೆ ಎನ್ನಲಾಗಿದೆ.ಈ ಸಂದರ್ಭ ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ಶಶಿಧರ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಪಘಾತದಲ್ಲಿ ಬೈಕ್ ಸವಾರನೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿರುವ ಉಳ್ಳಾಲ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ
 

 

Write A Comment