ಮಂಗಳೂರು : ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಅಶ್ರಯದಲ್ಲಿ ಮಂಗಳೂರು ಪುರಭವನದಲ್ಲಿ ಶನಿವಾರ ಉದ್ಘಾಟನೆಗೊಂಡ “ರಾಷ್ಟ್ರೀಯ ಬಂಟ ಮಹಾಸಮ್ಮೇಳನದ ಸಭಾಕಾರ್ಯಕ್ರಮದ ಬಳಿಕ ನಾಡಿನ ವಿವಿಧ ಬಂಟ ಕಲಾ ತಂಡಗಳಿಂದ ತುಳುನಾಡ ವೈಭವವನ್ನು ಪ್ರತಿಬಿಂಬಿಸಬಲ್ಲ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ಕಟೀಲು ಮೇಳದ ಆಯ್ದ ಕಲಾವಿದರಿಂದ ಬಂಟ ಸಮಾಜದ ವಿರಾಟ್ ಸ್ವರೂಪವನ್ನು ಸಾಕ್ಷಾತ್ಕರಿಸುವ ಭವ್ಯ ಕಾರ್ಯಕ್ರಮ ಮಹಿಷಾಸುರ ಮರ್ದಿನಿ ಯಕ್ಷಗಾನ ಬಯಲಾಟ ಜರುಗಿತು.
ಆಕರ್ಷಕ ಹಾಗೂ ವೈವಿಧ್ಯಮಯವಾಗಿ ನಡೆದ ಈ ಬಂಟ ಕಲಾಕೂಟ ಕಾರ್ಯಕ್ರಮ ನೆರೆದ ಕಲಾ ರಸಿಕರ ಮನಸೆಳೆಯಿತು.