ಕನ್ನಡ ವಾರ್ತೆಗಳು

ಪೇಜಾವರ ಶ್ರೀಗಳ ಪೌರಸಂಮಾನ – ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸಂಘ ಸಂಸ್ಥೆಗಳಿಗೆ ಆಹ್ವಾನ.

Pinterest LinkedIn Tumblr

pradeep_kumar_kalkura

ಮಂಗಳೂರು,ಡಿ.31: ನಗರದ ಪುರಭವನದಲ್ಲಿ ಜನವರಿ 3 ರವಿವಾರ ಸಂಜೆ ಜರಗಲಿರುವ’ಪೇಜಾವರ ಶ್ರೀಗಳ ಪೌರಸಂಮಾನ’ ಸಮಾರಂಭದ ಪ್ರಯುಕ್ತ‌ ಅಂದು ಸಂಜೆ 4 ಗಂಟೆಗೆ ಶರವು ದೇವಸ್ಥಾನದಿಂದ ಪುರಭವನದವರೆಗೆ ಭವ್ಯಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಈ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು ಹಾಗೂ ಸಾಂಸ್ಕೃತಿಕ ತಂಡಗಳನ್ನು ವಿನಂತಿಸಲಾಗಿದೆ. ಭಾಗವಹಿಸುವ ತಂಡಗಳು ಮುಂಚಿತವಾಗಿ ಗಣೇಶ್ ಭಟ್ ಶರವು (9448133027) ಅವರನ್ನು ಸಂಪರ್ಕಿಸುವಂತೆ ಸಂಮಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Write A Comment