ಮ೦ಗಳೂರು ಡಿ.18: ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು ನಗರದ ಇತಿಹಾಸದಲ್ಲಿ ಪ್ರಥಮ ಭಾರಿಗೆ ಸ್ಟೇಟ್ ಬ್ಯಾಂಕ್ನಿಂದ ನಗರ ಸಾರಿಗೆಯನ್ನು ಪ್ರಾರಂಭಿಸಲಾಗಿರುತ್ತದೆ.
ಡಿ. 16 ರಿಂದ ಸ್ಟೇಟ್ಬ್ಯಾಂಕ್-ಮಂಗಳಪೇಟೆ, ಸ್ಟೇಟ್ಬ್ಯಾಂಕ್-ಮಡ್ಯಾರ್ ಮುಡಿಪು, ಸ್ಟೇಟ್ಬ್ಯಾಂಕ್-ಸೋಮೇಶ್ವರ ಮಾರ್ಗದಲ್ಲಿ, ಡಿ.18 ರಿಂದ ಸ್ಟೇಟ್ಬ್ಯಾಂಕ್-ಮೂಡುಶೆಡ್ಡೆ/ಪಿಲಿಕುಲ, ಸ್ಟೇಟ್ಬ್ಯಾಂಕ್-ಕಿನ್ಯಾ ಮಾರ್ಗಸೂಚಿಗಳನ್ನು ಆರಂಭಿಸಲಾಗಿದೆ.
ಡಿ.21 ರಿಂದ ಸ್ಟೇಟ್ಬ್ಯಾಂಕ್-ಕಾಟಿಪಳ್ಳ ಕೈಕಂಬ, ಸ್ಟೇಟ್ಬ್ಯಾಂಕ್-ತಲಪಾಡಿ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ಕೆಎಸ್ಆರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.