ಕನ್ನಡ ವಾರ್ತೆಗಳು

ವಿವಿಧ ಅಪರಾಧ ಪ್ರಕರಣಗಳ ಮೂವರು ರೌಡಿಗಳ ಮೇಲೆ ಗೂಂಡಾ ಕಾಯ್ದೆ ಜ್ಯಾರಿ : ಎಸ್.ಮುರುಗನ್

Pinterest LinkedIn Tumblr

Murgan_Police_Commsnr

ಮಂಗಳೂರು, ಡಿ,12: ಬಿಜೈ ರಾಜಾ ಕೊಲೆ ಸೇರಿದಂತೆ ಕೊಲೆಯತ್ನ, ಡಕಾಯಿತಿ ಸೇರಿ 8 ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 2 ರೌಡಿ ಶೀಟರ್ ಗಳ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸುವಂತೆ ಕಮಿಷನರ್ ಎಸ್. ಮುರುಗನ್ ಆದೇಶಿಸಿದ್ದಾರೆ.

ಈಗಾಗಲೇ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಬೊಕ್ಕಪಟ್ಣ ನಿವಾಸಿ ಭರತೇಶ್, ಕೊಟ್ಟಾರ ನಿವಾಸಿ ಚಂದ್ರಹಾಸ್ ಶೆಟ್ಟಿ ಎಂಬುವರ ಮೇಲೆ ಗೂಂಡಾ ಕಾಯ್ದೆ ದಾಖಲಿಸುವಂತೆ ಕಮಿಷನರ್ ಆದೇಶಿಸಿದ್ದಾರೆ.

2 ದಿನಗಳ ಹಿಂದೆ ರೌಡಿ ಶೀಟರ್ ಸಫ್ವಾನ್ ಮೇಲೆ ಗೂಂಡಾ ಕಾಯ್ದೆ ದಾಖಲಿಸಿದ್ದು , ವಿವಿಧ ಅಪರಾಧಗಳಲ್ಲಿ ಭಾಗಿಯಾಗಿದ್ದ ಮೂವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ.

Write A Comment