ಕನ್ನಡ ವಾರ್ತೆಗಳು

“ಸವ್ಯಸಾಚಿ ಪುನರೂರು” – ಕೃತಿ ಅನಾವರಣ.

Pinterest LinkedIn Tumblr

Savyasachi_book_Release_1

ಮಂಗಳೂರು,ನ.12 : ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರ ಬದುಕು, ಚಿತ್ರಣವನ್ನೊಳಗೊಂಡ ‘ಸವ್ಯಸಾಚಿ ಪುನರೂರು’ ಪುಸ್ತಕದ ಬಿಡುಗಡೆ ಸಮಾರಂಭವು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಗುರುವಾರದಂದು ಬೆಳಿಗ್ಗೆ ನಡೆಯಿತು.

ಪುಸ್ತಕವನ್ನು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಡುಗಡೆಗೊಳಿಸಿ, ಮಾತನಾಡಿದರು. ಪುನರೂರು ಬದುಕಿನ ಚಿತ್ರಣ ತೆರೆದ ಪುಸ್ತಕವಾಗಿದೆ, ಅವರ ಸೈದ್ದಾಂತಿಕ ನಿಲೆಯು ಪ್ರತಿಯೊಬ್ಬರ ಆದರ್ಶ ಆಗಬೇಕು, ಮನೆ ಮನದಲ್ಲಿ ಹರಿಕೃಷ್ಣ ಪುನರೂರುರವರ ಪರಿಚಯ ಕೃತಿಯು ಅಚ್ಚಾಗಲಿ, ಮುಂದಿನ ಯುವ ಪೀಳಿಗೆಗೆ ಅವರ ಆದರ್ಶವು ದಾರಿ ದೀಪವಾಗಬೇಕು, ಕೃತಿಕಾರರ ಶ್ರಮ ಶ್ಲಾಘನೀಯ ಎಂದು ಸಂಸದನ ನಳಿನ್‌ಕುಮಾರ್ ಕಟೀಲು ಹೇಳಿದರು.

Savyasachi_book_Release_2

ಈ ಸಂದರ್ಭ ವೇದಿಕೆಯಲ್ಲಿ ಮೂಲ್ಕಿ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ದೇವಿಪ್ರಸಾದ್ ಪುನರೂರು, ಮೂಲ್ಕಿ ಪ್ರೆಸ್‌ಕ್ಲಬ್ ಅಧ್ಯಕ್ಷ ನರೇಂದ್ರ ಕೆರೆಕಾಡು ಉಪಸ್ಥಿತರಿದ್ದರು.

ಮಾನವ್ ಪ್ರಕಾಶನ ಪ್ರಕಟಿಸಿದ ಪುಸ್ತಕವನ್ನು ಪತ್ರಕರ್ತ ಅಶೋಕ್ ಶೆಟ್ಟಿ ಬಿ.ಎನ್. ಅವರು ರಚಿಸಿದ್ದಾರೆ. ಬಿಡುಗಡೆ ಸಮಾರಂಭದಲ್ಲಿ ಅಶೋಕ್ ಶೆಟ್ಟಿ ಬಿ.ಎನ್. ಸ್ವಾಗತಿಸಿ, ಕಾರ್ಯಕ್ರಮ  ನಿರೂಪಿಸಿದರು.

Write A Comment