ಕನ್ನಡ ವಾರ್ತೆಗಳು

ಮಾಣಿ ಬಳಿ ಬಸ್- ಬೈಕ್ ಅಪಘಾತ : ಬಸ್ ಸಂಪೂರ್ಣ ಬೆಂಕಿಗಾಹುತಿ – ಬೈಕ್ ಸವಾರ ಸಾವು

Pinterest LinkedIn Tumblr

Mani_Bus_Fire_1

ಮಂಗಳೂರು : ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದು, ಇದೇ ಸಂದರ್ಭದಲ್ಲಿ ಬಸ್ಸಿಗೆ ಹಠಾತ್‌ ಬೆಂಕಿ ಹತ್ತಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಗುರುವಾರ ಉಪ್ಪಿನಂಗಡಿಯ ಮಾಣಿ ಸಮೀಪದ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ (ಬುಡೋಳಿ ಬೊಲ್ಲಕಲ್ಲು ಎಂಬಲ್ಲಿ) ಸಂಭವಿಸಿದೆ. ದುರ್ಘ‌ಟನೆಯಲ್ಲಿ ಮೃತಪಟ್ಟ ಬೈಕ್‌ ಸವಾರನನ್ನು ಉಪ್ಪಿನಂಗಡಿಯ ಹಳೇನೇರಂಕಿ ಗ್ರಾಮದ ಚೇತನ್‌ ಎಂದು ಗುರುತಿಸಲಾಗಿದೆ.

ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಹಾಗೂ ಮುಂದಿನಿಂದ ಬರುತ್ತಿದ್ದ ಬೈಕಿ ಮಧ್ಯೆ ಮುಖಾಮುಖೀ ಢಿಕ್ಕಿ ಹೊಡೆದು ಈ ದುರ್ಘ‌ಟನೆ ಸಂಭವಿಸಿದೆ. ಢಿಕ್ಕಿಯ ರಭಸಕ್ಕೆ ಬಸ್ಸಿನ ಡಿಸೇಲ್‌ ಟ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ಸನ್ನು ಸಂಪೂರ್ಣ ಅವರಿಸಿಕೊಂಡಿದೆ. ತಕ್ಷಣ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಬಸ್ಸಿನಿಂದ ಇಳಿದ ಪ್ರಯಣಿಕರು ನೋಡುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದ್ದು, ಸುಟ್ಟು ಕರಕಲಾಗಿದೆ.

Mani_Bus_Fire_3

Mani_Bus_Fire_2Mani_Bus_Fire_4 Mani_Bus_Fire_5 Mani_Bus_Fire_6

ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬಸ್ಸಿನ ಚಾಲಕನಿಗೆ ಅಲ್ಪಸ್ವಲ್ಪ ಗಾಯಗಳಾಗಿದ್ದು ಆವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಆರಿಸುವ ಮೂಲಕ ಬೆಂಕಿ ಸುತ್ತಮುತ್ತ ಪಸರಿಸಕ್ಕೆ ಹರಡದಂತೆ ತಡೆಯುವಲ್ಲಿ, ಹಾಗೂ ಪರಿಸರದಲ್ಲಿ ಹೆಚ್ಚಿನ ಅನಾಹುತ ಆಗದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅಫ‌ಘಾತದ ಪರಿಣಾಮ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಎರಡು ಗಂಟೆಗಳಿಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಆಡಚಣೆ ಉಂಟಾಯಿತು.

Write A Comment