ಕನ್ನಡ ವಾರ್ತೆಗಳು

ಬನ್ನಂಜೆ ರಾಜಾಗೆ ಒಂದು ತಿಂಗಳ ನ್ಯಾಯಾಂಗ ಬಂಧನ ವಿಧಿಸಿದ ಉಡುಪಿ ಕೋರ್ಟ್

Pinterest LinkedIn Tumblr

Bannanje-raja-Aug-15_2015-002

ಉಡುಪಿ: ಭೂಗತ ಪಾತಕಿ ಬನ್ನಂಜೆ ರಾಜನನ್ನು ಸೋಮವಾರ ಉಡುಪಿಯ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಲಯವು ಒಂದು ತಿಂಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಅಕ್ಟೋಬರ್ 14 ತನಕ ಒಂದು ತಿಂಗಳ ನ್ಯಾಯಾಂಗ ಬಂಧನ ವಿಧಿಸಿ ಉಡುಪಿ ಜಿಲ್ಲಾ ನ್ಯಾಯಾಧೀಶರು ಆದೇಶ ಹೊರಡಿಸಿದ್ದು ಬಿಗಿ ಭದ್ರತೆಯಲ್ಲಿ ಬನ್ನಂಜೆಯನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಲಾಗಿದೆ. ಈ ಹಿಂದೆ ಬನ್ನಂಜೆಯನ್ನು ಒಂದು ವಾರಗಳ ಕಾಲ ಉಡುಪಿ ಪೊಲೀಸರು ಕಸ್ಟಡಿಗೆ ಪಡೆದಿದ್ದು, ಆ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಪುನಃ ಬನ್ನಂಜೆಯನ್ನು ಕೋರ್ಟ್ ಗೆ ಹಾಜರುಪಡಿಸಿದ್ದರು.

ಐರೋಡಿ ಜ್ಯುವೆಲ್ಲರ್ಸ್ ಮಾಲೀಕನ ಹತ್ಯೆ ಯತ್ನ, ಉದ್ಯಮಿ ಆನಂದ ಶೆಟ್ಟಿ ಡಕಾಯಿತಿ, ಕೊಲೆಯತ್ನ ಪ್ರಕರಣ ಮೊದಲಾದವುಗಳ ವಿಚಾರಣೆಗಾಗಿ ಅಕ್ಟೋಬರ್ 14 ಕ್ಕೆ ಮತ್ತೆ ಉಡುಪಿ ಕೋರ್ಟಗೆ ಬನ್ನಂಜೆ ರಾಜಾನನ್ನು ಪೊಲೀಸರು ಹಾಜರು ಪಡಿಸಿ ತಮ್ಮ ಕಸ್ಟಡಿಗೆ ಕೇಳುವ ಸಾಧ್ಯತೆಗಳಿದೆ.

Write A Comment