ಮಂಗಳೂರು,ಜೂನ್.01 : ಮಂಗಳೂರು ಮಹಾನಗರ ಪಾಲಿಕೆಯ ಅನುದಾನದಿಂದ 26ನೇ ದೇರೆಬೈಲು ನೈರುತ್ಯ ವಾರ್ಡಿನ ಉರ್ವಾ ಹೊಗೆಬೈಲಿನ ಬಳಿ ಸುಮಾರು 26 ಲಕ್ಷ ರೂಪಾಯಿ ವೆಚ್ಚದಲ್ಲಿ ಒಳಚರಂಡಿ ವ್ಯವಸ್ಥೆಯ ಗುದ್ದಲಿ ಪೂಜೆಯನ್ನು ವಾರ್ಡಿನ ನಗರಪಾಲಿಕೆಯ ಸದಸ್ಯ ರಾಧಕೃಷ್ಣರವರು ನೇರವೆರಿಸಿದರು.
ಈ ಸಂದರ್ಭದಲ್ಲಿ ಮನಪಾ ಸದಸ್ಯರಾದ ನಾಗವೇಣಿ, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವಿಶ್ವಾಸ್ ದಾಸ್, ವಾರ್ಡ ಅಧ್ಯಕ್ಷ ಉಮೇಶ್ ಕೋಟ್ಯನ್, ನರಸಿಂಹ ಬೋಳೂರು, ಬಿ.ಜಿ. ಸುವರ್ಣ, ದೀಲಿಪ್ ಕುಮಾರ್, ಚೇತನ್ ಕುಮಾರ್, ವಾಮನ ಶೆಟ್ಟಿ, ಟಿ.ಕೆ. ಸುಧೀರ್, ನಿಲೇಶ್, ರವಿ ಉರ್ವಾ, ಗಣೇಶ್ ಮುಂತಾದವರು ಉಪಸ್ಥಿತರಿದ್ದರು.