ಕನ್ನಡ ವಾರ್ತೆಗಳು

ಮೇ 10 : ಕಾರ್ಕಳ ಶ್ರೀ ಬಾಹುಬಲಿ ಸ್ವಾಮಿಗೆ ಈ ದಶಕದ ಕೊನೆ ಮಹಾಮಸ್ತಕಾಭಿಷೇಕ

Pinterest LinkedIn Tumblr

Scdc_news_photo_5

ಮಂಗಳೂರು : ಕಾರ್ಕಳದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಗೆ ಮೇ 10ರಂದು ಈ ದಶಕದ ಕೊನೆ ಮಹಾಮಸ್ತಕಾಭಿಷೇಕ ಜರಗಲಿದೆ. ಸಂಜೆ 4 ಗಂಟೆಗೆ ಶ್ರೀ ಜೈನ ಮಠದಿಂದ ಅದ್ಧೂರಿ ವೈಭವದ ಅಗ್ರೋದಕ ಮೆರವಣಿಗೆ, ಸಂಜೆ 5 ಗಂಟೆಗೆ 1,008 ಕಳಸಗಳೊಂದಿಗೆ ಮಹಾಮಸ್ತಕಾಭಿಷೇಕ ಪ್ರಾರಂಭಗೊಳ್ಳಲಿದೆ ಎಂದು ಮಹಾಮಸ್ತಕಾಭಿಷೇಕ ಸಮಿತಿ ಕಾರ್ಯಾಧ್ಯಕ್ಷರು ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Scdcc_Press_MeeeT_5 Scdcc_Press_MeeeT_8

ಸಮಿತಿ ಉಪಾಧ್ಯಕ್ಷ ಪುಷ್ಪರಾಜ ಜೈನ್‌, ಡಾ| ಶ್ರೀಧರ್‌ ಕಂಬಳಿ, ಸುದರ್ಶನ್‌ ಜೈನ್‌, ಸುನೀಲ್‌ ಕುಮಾರ್‌ ಬಜಗೋಳಿ ಮೊದಲಾದವರು ಉಪಸ್ಥಿತರಿದ್ದರು.

Write A Comment