ಮಂಗಳೂರು : ಅಖಿಲ ಭಾರತ ಅಥ್ಲೆಟಿಕ್ ಫೆಡರೇಶನ್ ವತಿಯಿಂದ ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಸಹಭಾಗಿತ್ವ ಹಾಗೂ ದ.ಕ. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ದ.ಕ. ಜಿಲ್ಲಾಡಳಿತದ ಆತಿಥ್ಯದೊಂದಿಗೆ ನಡೆಯಲಿರುವ `ಫೆಡರೇಶನ್ ಕಪ್-ರಾಷ್ಟ್ರೀಯ ಕ್ರೀಡಾಕೂಟ’ಕ್ಕೆ ಕರ್ನಾಟಕ ರಾಜ್ಯ ಸರಕಾರವು 50ಲಕ್ಷ ರೂಪಾಯಿಗಳನ್ನು ಬಿಡುಗಡೆಗೊಳಿದೆ.
ಅದರ ಚೆಕ್ನ್ನು ರಾಜ್ಯ ಕ್ರೀಡಾ ಸಚಿವರಾದ ಶ್ರೀ ಅಭಯಚಂದ್ರ ಜೈನ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ರಮಾನಾಥ ರೈ ಅವರು ದಕ್ಷಿಣಕನ್ನಡ ಜಿಲ್ಲಾಕಾರಿ ಶ್ರೀ ಎ. ಬಿ. ಇಬ್ರಾಹಿಂ ಅವರಿಗೆ ಹಸ್ತಾಂತರಿಸಿದರು.