ಮಂಗಳೂರು: ಯೇಸು ಕ್ರಿಸ್ತನ ಪುನರುತ್ಥಾನ ದಿನ ಹಿನ್ನೆಲೆಯಲ್ಲಿ ‘ಈಸ್ಟರ್’ ಹಬ್ಬಾಚರಣೆಯನ್ನು ಕ್ರಿಶ್ಚಿಯನ್ ಸಮುದಾಯದವರು ಭಾನುವಾರ(ಏ.5)ದಂದು ಸಂಭ್ರಮದಿಂದ ಆಚರಿಸಲಿದ್ದಾರೆ.
ಈಸ್ಟರ್ ಹಬ್ಬದ ಪ್ರಯುಕ್ತ ಮಂಗಳೂರು ಧರ್ಮ ಪ್ರಾಂತ್ಯದ ಬಿಷಪ್ ರೆ.ಡಾ.ಅಲೋಶಿಯಸ್ ಪಾವ್ಲ್ ಡಿಸೋಜ ಅವರು ರೊಸಾರಿಯೋ ಕೆಥಡ್ರಲ್ನಲ್ಲಿ ಮೊಂಬತ್ತಿ ಉರಿಸಿ ಹಬ್ಬಕ್ಕೆ ಶನಿವಾರ ಚಾಲನೆ ನೀಡಿದರು. ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ, ಪೂಜೆ ನಡೆಯಿತು.ಪ್ರಧಾನ ಗುರುಗಳಾದ ಫಾ | ಜೆ.ಬಿ. ಕ್ರಾಸ್ತಾ, ಫಾ| ಸ್ಟ್ಯಾನಿ ಬಿ. ಲೋಬೊ ಮತ್ತು ಇತರ ಗುರುಗಳು ಉಪಸ್ಥಿತರಿದ್ದರು. ಬೆಂದೂರು ಸೈಂಟ್ ಸೆಬಾಸ್ಟಿಯನ್ ಚರ್ಚ್ನಲ್ಲಿ ಕ್ರಿಶ್ಚಿಯನ್ ಸಮುದಾಯದವರು ಮೊಂಬತ್ತಿ ಉರಿಸಿ ಈಸ್ಟರ್ ಹಬ್ಬ ಮುನ್ನಾ ದಿನದ ಪ್ರಾರ್ಥನೆ ಶನಿವಾರ ಸಲ್ಲಿಸಿದರು.