ಕನ್ನಡ ವಾರ್ತೆಗಳು

ಕುಂದಾಪುರ ನಗರ ಯೋಜನಾ ಪ್ರಾಧೀಕರದ ನೂತನ ಅಧ್ಯಕ್ಷರಾಗಿ ಜಾಕೋಬ್ ಡಿ’ಸೋಜಾ ಅಧಿಕಾರ ಸ್ವೀಕಾರ

Pinterest LinkedIn Tumblr

ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ ನಗರ ಯೋಜನಾ ಪ್ರಾಧೀಕರದ ನೂತನ ಅಧ್ಯಕ್ಷ (ಕೆ.ಯು.ಡಿ.ಎ.)ರಾಗಿ ಜಾಕೋಬ್ ಡಿ’ಸೋಜಾ ಅವರು ಸೋಮವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದರು.

KUDA_Jacob_Dsouza (2) KUDA_Jacob_Dsouza (6) KUDA_Jacob_Dsouza (1) KUDA_Jacob_Dsouza (4) KUDA_Jacob_Dsouza (7) KUDA_Jacob_Dsouza (5) KUDA_Jacob_Dsouza (3) KUDA_Jacob_Dsouza

ಕುಂದಾಪುರ ಪುರಸಭೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅವರು ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ, ಅಧಿಕಾರಾವಧಿಯಲ್ಲಿ ಕುಂದಾಪುರ ನಗರ ಮುಂದಿನ ದಿನಗಳಲ್ಲಿ ಮದರಿಯಾಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿ ಸರಕಾರಕ್ಕೆ ಕಳುಹಿಸಲಾಗುತ್ತದೆ. ಕುಂದಾಪುರ ನಗರವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುವಲ್ಲಿ ಪ್ರಾಮಾಣಿಕ ಪ್ರಯತ್ನ ಹಾಗೂ ಪ್ರಾಧಿಕಾರದಿಂದ ಭ್ರಷ್ಟಾಚಾರ ರಹಿತ ಆಡಳಿತ ನನ್ನ ಗುರಿಯಾಗಿದೆ ಎಂದರು.

ವೇದಿಕೆಯಲ್ಲಿ ಪುರಸಭಾಧ್ಯಕ್ಷೆ ಕಲಾವತಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೆರಿಯಣ್ಣ, ಕೆ.ಯು.ಡಿ.ಎ. ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಾಣಿಗೋಪಾಲ್ ಸೇರಿದಂತೆ ಪುರಸಭೆಯ ಸದಸ್ಯರು ಉಪಸ್ಥಿತರಿದ್ದು ನೂತನ ಅಧ್ಯಕ್ಷರಿಗೆ ಶುಭಕೋರಿದರು.

Write A Comment