ಕನ್ನಡ ವಾರ್ತೆಗಳು

ದ.ಕ. ಜಿಲ್ಲಾಡಳಿತದ ವತಿಯಿಂದ ತುಳು ನಾಟಕ ಕಲಾವಿದ ಕೆ.ಎನ್‌. ಟೇಲರ್‌ ಗೆ 50,000 ರೂ ಹಸ್ತಾಂತರ

Pinterest LinkedIn Tumblr

kn_tailor_hospitazed_1

ಮಂಗಳೂರು,ಫೆ.18 :  ತುಳು ನಾಟಕ ನಿರ್ದೇಶಕ, ಕಲಾವಿದ ಕೆ.ಎನ್‌. ಟೇಲರ್‌ ಅವರು ಅನಾರೋಗ್ಯಕ್ಕೊಳಗಾಗಿ ನಗರದ ವಿನಯ ನರ್ಸಿಂಗ್‌ ಹೋಂನಲ್ಲಿ ದಾಖಲಾಗಿದ್ದು, ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭೇಟಿ ಮಾಡಿ ಅವರ ಆಸ್ಪತ್ರೆ ವೆಚ್ಚಕ್ಕಾಗಿ ದ.ಕ. ಜಿಲ್ಲಾಡಳಿತದ ವತಿಯಿಂದ 50,000 ರೂ.ಗಳನ್ನು ಅವರಿಗೆ ಹಸ್ತಾಂತರಿಸಿದರು.

kn_tailor_hospitazed_2a

ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಕಲಾವಿದ ಕೆ.ಎನ್‌. ಟೇಲರ್‌ ಅವರ ಆಸ್ಪತ್ರೆ ಖರ್ಚು ವೆಚ್ಚಗಳಿಗಾಗಿ ಜಿಲ್ಲಾಡಳಿತದಿಂದ 50,000 ರೂ. ಹಸ್ತಾಂತರಿಸಲಾಗಿದ್ದು.ಇನ್ನು ಮುಂದೆ ಅವರ ಜೀವನಕ್ಕಾಗಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ಅವರಿಗೆ ಧನಸಹಾಯ ನೀಡುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಲಾಗುವುದು ಎಂದು ಅವರು ಸುದ್ದಿಗಾರರಿಗೆ ಹೇಳಿದರು.

ಜಿ.ಪಂ. ಸದಸ್ಯ ಪ್ರಕಾಶ್‌ ತುಂಬೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಚಂದ್ರಹಾಸ ರೈ ಮೊದಲಾದವರು ಉಪಸ್ಥಿತರಿದ್ದರು.

Write A Comment