ಕನ್ನಡ ವಾರ್ತೆಗಳು

ಕಾವ್ಯಕಮ್ಮಟ ಕಾರ್ಯಕ್ರಮ ಉದ್ಘಾಟನೆ.

Pinterest LinkedIn Tumblr

kavya_kammatta_phot

ಮಂಗಳೂರು,ಜ.17: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಂಘ, ರೋಸಾರಿಯೋ ಕಾಲೇಜು ‌ಆಫ್ ಮೆನೇಜ್‌ಮೆಂಟ್ ಸ್ಟಡೀಸ್‌ ಬೋಳಾರ ಮಂಗಳೂರು ಇವುಗಳ ಜಂಟಿ ‌ಆಶ್ರಯದಲ್ಲಿ ಶನಿವಾರ ಸ್ಟೇಟ್‌ಬ್ಯಾಂಕ್ ಬಳಿಯ ರೋಸಾರಿಯೋ ಕಾಲೇಜಿನಲ್ಲಿ ‘ಕಾವ್ಯಕಮ್ಮಟ’ ಕಾರ್ಯಕ್ರಮ ಜರಗಿತು.

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ‌ಅಧ್ಯಕ್ಷ‌ ಎಸ್. ಪ್ರದೀಪ ಕುಮಾರ ಕಲ್ಕೂರರ‌ ಅಧ್ಯಕ್ಷತೆಯಲ್ಲಿ ರೋಸಾರಿಯೋ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರೆ|ಫಾ| ಜೆ.ಬಿ. ಕ್ರಾಸ್ತಾ ಕಾರ್‍ಯಕ್ರಮವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಫಾ| ಆಲ್ವಿನ್ ಸೆರಾವೋ ‌ಉಪಸ್ಥಿತರಿದ್ದರು.

ಕೆನರಾ ಪದವಿ ಪೂರ್ವ ಕಾಲೇಜಿನ‌ ಉಪನ್ಯಾಸಕ ರಘು‌ಇಡ್ಕಿದು ಮತ್ತು ಸುರತ್ಕಲ್‌ ಗೋವಿಂದದಾಸ್‌ ಕಾಲೇಜಿನ ಸಹಪ್ರಾಧ್ಯಾಪಕರಾದ ಪ್ರೊ| ಕೃಷ್ಣಮೂರ್ತಿ ಪಿ. ಇವರ ನಿರ್ದೇಶನದಲ್ಲಿ ಕಮ್ಮಟ ನೆರವೇರಿತು. ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ ಪ್ರಸ್ತಾವನೆ ಗೈದರು. ಕಾಲೇಜಿನ ಕನ್ನಡ ಸಂಘದ‌ ಅಧ್ಯಕ್ಷ ಓಬನಾಥ್ ಸ್ವಾಗತಿಸಿದರು. ವಿದ್ಯಾರ್ಥಿನಿ ಅನಿತಾ ವಂದಿಸಿದರು ಹಾಗೂ ರಿಶಾಲ್‌ ಕಾರ್ಯಕ್ರಮ ನಿರೂಪಿಸಿದರು.

Write A Comment