ಕನ್ನಡ ವಾರ್ತೆಗಳು

ನವತಿ ಕಾರ್ಯಕ್ರಮ ಪ್ರಯುಕ್ತ ವ್ಯಾಸ ಧ್ವಜ ಯಾತ್ರೆಗೆ ಚಾಲನೆ

Pinterest LinkedIn Tumblr

flag_prosetion_photo_1

ಮಂಗಳೂರು,ಜ.06 : ಕಾಶೀ ಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮಿಜಿಯವರ ನವತಿ ಕಾರ್ಯಕ್ರಮದ ಪ್ರಯುಕ್ತ ಭಟ್ಕಳದಲ್ಲಿರುವ ಶ್ರೀ ಕಾಶೀ ಮಠದಲ್ಲಿ ವ್ಯಾಸ ಧ್ವಜದೊಂದಿಗೆ ಭಜನಾ ಯಾತ್ರೆಗೆ ಚಾಲನೆ ನೀಡಲಾಯಿತು .

flag_prosetion_photo_2

ಶ್ರೀ ಕಾಶಿ ಮಠದ ಕಿರಿಯ ಯತಿವರ್ಯರಾದ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮಿಜಿಯವರ ಆಶೀರ್ವಾದದೊಂದಿಗೆ ಈ ಯಾತ್ರೆಯು ಪ್ರಾರಂಭ ಗೊಂಡಿದ್ದು, ಮಂಗಳೂರು ಮತ್ತು ಕೋಟೇಶ್ವರ ಭಜನಾ ತಂಡ ಭಟ್ಕಳಕ್ಕೆ ಆಗಮಿಸಿದ್ದು, ಅಲ್ಲಿಂದ ಈ ಭಜನಾ ತಂಡವು ಹರಿದ್ವಾರಕ್ಕೆ ಹೊರಟಲಿದೆ . ಹರಿದ್ವಾರದಲ್ಲಿ ನಡೆಯುವ ಕಾಶೀ ಮಠದ ಹಿರಿಯ ಶ್ರೀಗಳ ನವತಿ ಕಾರ್ಯಕ್ರಮ ಸಾಂಗವಾಗಿ ನೆರವೆರಬೇಕು ಎಂಬ ಆಶಯದೊಂದಿಗೆ ಲೋಕ ಕಲ್ಯಾಣಕ್ಕಾಗಿ ಧ್ವಜ ಯಾತ್ರೆ ಹಮ್ಮಿಕೊಳ್ಳಲಾಗಿದೆ .

flag_prosetion_photo_3 flag_prosetion_photo_4

ಕಾಶೀ ಮಠದ ಮೂಲ ಮಠದಿಂದ ಭಜನೆ ಪ್ರಾರಂಭವಾಗಿದ್ದು ಪ್ರತೀ ಊರಿನಲ್ಲಿ ತಲಾ ಒಂದು ಕಿ . ಲೋ ಕಾಲ್ನಡಿಗೆಯಲ್ಲಿ ಸಾಗಿ ನಂತರ ವಾಹನಗಳ ಮೂಲಕ ಉಡುಪಿ , ಮಂಗಳೂರು , ಪ್ರದೇಶ ಬಳಿಕ ಮುಲ್ಕಿಯಲ್ಲಿ ಸಮಾವೇಶಗೊಳ್ಳಲಿದೆ . ನಂತರ ಈ ತಂಡ ಹರಿದ್ವಾರಕ್ಕೆ ತೆರಳಲಿದೆ .

ಚಿತ್ರ : ಮಂಜು ನಿರೇಶ್ವಾಲ್ಯ

Write A Comment