ವೇಣೂರು,ಜ.05 : ಶ್ರೀಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಇದರ ಪುನರ್ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ಜನವರಿ೧ ರಂದು ಬೆಳಗ್ಗೆ ೧೦ಕ್ಕೆ ಅಳದಂಗಡಿ ಅರಮನೆಯ ತಿಮ್ಮಣ್ಣಾರಸರಾದ ಡಾ.ಪದ್ಮಪ್ರಸಾದ್ ಅಜಿಲರ ಮಾರ್ಗದರ್ಶನದೊಂದಿಗೆ ತಂತ್ರಿವರ್ಯ ಬ್ರಹ್ಮಶ್ರೀ ಉದಯ ಪಾಂಗಣ್ಣಾಯರ ನೇತೃತ್ವದಲ್ಲಿ ದೈವಜ್ಞ ಪಿ.ವೆಂಕಟ್ರಮಣ ಭಟ್ ಮಾಡಾವು ಮತ್ತು ದೈವಜ್ಞ ಕೇಶವ ಆಚಾರ್ಯ ಇವರಿಂದ ಅಷ್ಟಮಂಗಲ ಪ್ರಶ್ನೆ ನಡೆಯಲಿದೆ.
ಸಮಾಲೋಚನಾ ಸಭೆ:
ವೇಣೂರು: ಶ್ರೀಸೂರ್ಯನಾರಾಯಣ ಕ್ಷೇತ್ರ ಬಲ್ಲಂಗೇರಿ- ಅಂಗರಕರಿಯ ಇಲ್ಲಿ ಕೈಮಾರು ಶ್ರೀ ಸುಬ್ರಹ್ಮಣ್ಯ ಉಡುಪರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ಹವನದ ಉದ್ಯಾಪನಾ ಸಮಾರಂಭ ಜನವರಿ ೩ರಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಪೂರ್ವಾಹ್ನ ವಾಗೀಶ್ವರೀ ಹವನ , ಗಣಪತಿ ಹವನ ,ಶ್ರೀ ಸತ್ಯನಾರಾಯಣ ಪೂಜೆ , ಪೂರ್ಣಾಹುತಿ, ಮಹಾಮಂಗಳಾರತಿ ಪ್ರಸಾದ ಭೋಜನ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಶ್ರೀಮಹಾಗಣಪತಿ ಹವನದ ಉದ್ಯಾಪನಾ ಸಮಿತಿಯ ಅಧ್ಯಕ್ಷ ಕೈದೊಟ್ಟು ಆನಂದ, ಕಾರ್ಯದರ್ಶಿ ನಾಗೇಶ್ ಕೋಟ್ಯಾನ್, ಕೋಶಾಧಿಕಾರಿ ಸತೀಶ್ ಶೆಟ್ಟಿ, ಶ್ರೀ ಸೂರ್ಯನಾರಾಯಣ ಆರಾಧನಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಉದಯ ಕುಮಾರ್, ಕ್ಷೇತ್ರ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಯನ್.ಸೀತಾರಾಮ ರೈ, ಕಾರ್ಯದರ್ಶಿ ಪಿ.ಹರಿಪ್ರಸಾದ್ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.